ನವದೆಹಲಿ: ಚಿನ್ನ ಕಳ್ಳಸಾಗಣೆ ಪ್ರಕರಣ ಕೇರಳ ಸರ್ಕಾರಕ್ಕೆ ಮುಳುವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಜಾರಿ ನಿರ್ದೇಶನಾಲಯದ ವಿಚಾರಣೆಯ ವೇಳೆ ಮಹತ್ವದ ವಿಷಯವನ್ನು ಬಹಿರಂಗಪಡಿಸಿದ್ದಾರೆ.
2017ರಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯುಎಇ ದೂತವಾಸದ ಕಾನ್ಸುಲ್ ಜನರಲ್ರೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ ಎಂದು ಸ್ವಪ್ನ ಸುರೇಶ್ ವಿಚಾರಣೆ ವೇಳೆ ಹೇಳಿಕೊಂಡಿರುವುದಾಗಿ ಮೂಲಗಳು ವರದಿ ಮಾಡಿವೆ.
ಮಾತ್ರವಲ್ಲದೇ, ಪಿಣರಾಯಿ ವಿಜಯನ್ ಅವರು ಪ್ರಸ್ತುತ ಅಮಾನತುಗೊಂಡಿರುವ ತಮ್ಮ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಯುಎಇಯ ದೂತವಾಸದೊಂದಿಗೆ ಸಂಪರ್ಕದಲ್ಲಿರಲು ರಾಜ್ಯ ಸರ್ಕಾರದ ಅಧಿಕೃತ ಸಂಪರ್ಕ ಕೇಂದ್ರವಾಗಿ ಅನಧಿಕೃತವಾಗಿ ಶಿಫಾರಸು ಮಾಡಿದ್ದರು ಎಂದು ಆಕೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಸಿಎಂ ವಿಜಯನ್ ಅವರು ತಿರುವನಂತಪುರಂನ ತಮ್ಮ ಅಧಿಕೃತ ನಿವಾಸದಲ್ಲಿ ಯುಎಇ ದೂತವಾಸ ಅಧಿಕಾರಿಗಳೊಂದಿಗೆ ಹಲವಾರು ಅನಧಿಕೃತ ಸಭೆಗಳನ್ನು ಕೂಡ ನಡೆಸಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ.
ಆದರೆ ವಿಜಯನಗರ ಕಚೇರಿ ಎಲ್ಲಾ ಹೇಳಿಕೆಗಳನ್ನು ನಿರಾಕರಿಸಿದೆ ಮತ್ತು ಇದು ಕಟ್ಟುಕತೆ ಎಂದು ಹೇಳಿದೆ. ಆದರೆ ಸಪ್ನ ಸುರೇಶ್ ನೀಡಿರುವ ಹೇಳಿಕೆ ಅವರ ಸರಕಾರದ ವಿರುದ್ಧ ಜನರ ಆಕ್ರೋಶ ಭುಗಿಲೇಳುವಂತೆ ಮಾಡಿದೆ.
ತಿರುವನಂತಪುರಂನ ಸರ್ಕಾರಿ ಸ್ವಾಮ್ಯದ ಸ್ಪೇಸ್ಪಾರ್ಕ್ನಲ್ಲಿ ಸ್ವಪ್ನಾಗೆ ಕೆಲಸ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಶಂಕರ್ ಅವರನ್ನು ಪ್ರಕರಣದ ಪ್ರಮುಖ ಆರೋಪಿಗಳೊಂದಿಗಿನ ಸಂಪರ್ಕ ಹೊಂದಿದ್ದ ಬಗ್ಗೆ ಎನ್ಐಎ, ಕಸ್ಟಮ್ಸ್ ಮತ್ತು ಇಡಿ ಹಲವು ಬಾರಿ ವಿಚಾರಣೆ ನಡೆಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.