ಬೆಂಗಳೂರು: ಕೊರೋನಾ ಸೋಂಕು ರಾಜ್ಯವನ್ನು ಹೈರಾಣಾಗಿಸಿದೆ. ಈ ನಡುವೆ ಜಗತ್ತಿನ ಅನೇಕ ದೇಶಗಳು ಕೊರೋನಾ ವ್ಯಾಕ್ಸಿನ್ ಸಂಶೋಧನೆಗೆ ತೊಡಗಿದೆ. ಈ ನಡುವೆ ಕರ್ನಾಟಕ ಸರ್ಕಾರ ಕೊರೋನಾ ವ್ಯಾಕ್ಸಿನ್ ಬಂದ ಬಳಿಕ ಅದನ್ನು ಕೊರೋನಾ ಪೀಡಿತರಿಗೆ ನೀಡುವ ಸಲುವಾಗಿ ಲಸಿಕೆ ವಿತರಣಾ ಕೇಂದ್ರಗಳನ್ನು ಗುರುತಿಸಲು ಪ್ರಾರಂಭ ಮಾಡಿದೆ.
ವ್ಯಾಕ್ಸಿನ್ ಸಾಮೂಹಿಕವಾಗಿ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿ, ಸಮುದಾಯ ಆರೋಗ್ಯ ಕೇಂದ್ರಗಳನ್ನು ಗುರುತು ಮಾಡಲು ಸರ್ಕಾರ ಆರೋಗ್ಯ ಇಲಾಖೆಗೆ ಸೂಚಿಸಿದೆ. ಬಳಿಕ ಅಂತಹ ಕೇಂದ್ರಗಳನ್ನು ಸುತ್ತಮುತ್ತಲಿನ ನಿರ್ಧಿಷ್ಟ ಹಳ್ಳಿಗಳಿಗೆ ಲಸಿಕಾ ಕೇಂದ್ರಗಳಾಗಿ ಪರಿವರ್ತನೆ ಮಾಡಲಾಗುವುದು. ಜೊತೆಗೆ ಈ ಲಸಿಕೆಗಳನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸಲು ಮೊಬೈಲ್ ಘಟಕಗಳನ್ನು ಬಳಕೆ ಮಾಡಲಾಗುವುದು ಎಂದೂ ಸರ್ಕಾರ ಮಾಹಿತಿ ನೀಡಿದೆ.
ಲಸಿಕೆ ಲಭ್ಯವಾದಾಗ ಸಮಯ ವ್ಯರ್ಥವಾಗದಂತೆ ಅವುಗಳನ್ನು ಶೀಘ್ರ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ಬರುವ ಮುನ್ನವೇ ಈ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದಾಗಿ ಇಲಾಖೆ ಮಾಹಿತಿ ನೀಡಿದೆ. ಕೊರೋನಾ ಲಸಿಕೆ ಲಭ್ಯವಾದ ಕೂಡಲೇ 500 ಮಿಲಿಯನ್ ಡೋಸ್ಗಳಷ್ಟು ಲಸಿಕೆಗಳನ್ನು, ಸುಮಾರು 25 ಕೋಟಿ ಜನರಿಗೆ 2021 ಜುಲೈ ವೇಳೆಗೆ ನೀಡವ ಆಶಯ ಇದೆ ಎಂದೂ ಮೂಲಗಳು ಮಾಹಿತಿ ನೀಡಿವೆ. ಇದಕ್ಕಾಗಿ ಡಿಜಿಟಲ್ ಫ್ಲಾಟ್ಫಾರ್ಮ್ ಅನ್ನು ಆರಂಭಿಸಿ ವಿತರಣಾ ಸರಪಳಿಯನ್ನು ಸುಲಭಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಸರ್ಕಾರ ಮಾಹಿತಿ ನೀಡಿದೆ.
ರಾಜ್ಯದ ಎಲ್ಲಾ ಜನರಿಗೂ ಕೊರೋನಾ ಲಸಿಕೆ ದೊರೆಯುವಂತೆ ಮಾಡಲು ಸರ್ಕಾರ ಗುರಿ ಇಟ್ಟೂಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೊದಲ ಹಂತದಲ್ಲಿ ಕೊರೋನಾ ವಾರಿಯರ್ಸ್ ಸೇರಿದಂತೆ ಲಸಿಕೆ ನೀಡಲು ಆದ್ಯತಾ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.