ಲಕ್ನೋ: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ಅತ್ಯಾಚಾರ ಪ್ರಕರಣ ದಿನೇ ದಿನೇ ಸ್ಫೋಟಕ ತಿರುವು ಪಡೆಯುತ್ತಿದೆ. ಈ ಪ್ರಕರಣದ ಬಳಿಕ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ನಡೆಸಲಾದ ಷಡ್ಯಂತ್ರಗಳು ಬಯಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಅನಾಮಧೇಯ ವ್ಯಕ್ತಿಗಳ ವಿರುದ್ಧ ಕೇಸ್ ಕೂಡ ದಾಖಲು ಮಾಡಲಾಗಿದೆ.
120 ಬಿ, 153 ಎ, 153 ಬಿ, 195, 195 ಎ, 465, 468, 469, 501, 505, 505 ಬಿ ಸೆಕ್ಷನ್ ಸೇರಿದಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕ್ರಿಮಿನಲ್ ಪಿತೂರಿ, ಎರಡು ಗುಂಪುಗಳ ನಡುವೆ ವೈಷಮ್ಯಕ್ಕೆ ಪ್ರಚೋದನೆ, ಸುಳ್ಳು ಸಾಕ್ಷ್ಯ, ಸುಳ್ಳು ಸಾಕ್ಷ್ಯಕ್ಕೆ ಪ್ರಚೋದನೆ, ಖ್ಯಾತಿಗೆ ಧಕ್ಕೆ ಮಾಡಲು ಉದ್ದೇಶಪೂರ್ವಕ ಪ್ರಯತ್ನ, ಮಾನಹಾನಿಯುಂಟು ಮಾಡುವ ವಿಚಾರಗಳ ಮುದ್ರಣ, ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆ ಸೇರಿದಂತೆ ಇನ್ನೂ ಅನೇಕ ಅಹಿತಕರ ವಿಚಾರಗಳಿಗೆ ಸಂಬಂಧಿಸಿದಂತೆ ಈ ಸೆಕ್ಷನ್ಗಳನ್ನು ಹಾಕಲಾಗಿದೆ.
ಅದಲ್ಲದೆ ಹತ್ರಾಸ್ ಪ್ರಕರಣದಲ್ಲಿ ವ್ಯಾಪಕವಾಗಿ ಗಲಭೆ ಹರಡಲು ಕುತಂತ್ರ ನಡೆಸಿದ್ದ justiceforhatrasvictims.carrd.co ಬಗೆಗೂ ಸುದ್ದಿ ಮಾಧ್ಯಮವೊಂದು ಮಾಹಿತಿ ನೀಡಿದ್ದು, ಇದು ದೇಶವ್ಯಾಪಿ ಪ್ರತಿಭಟನೆಗೂ ಕುಮ್ಮಕ್ಕು ನಡೆಸಿತ್ತು. ಪೊಲೀಸರು ಈ ವೆಬ್ಸೈಟ್ ಮೂಲವನ್ನು ಪತ್ತೆ ಮಾಡಲು ಮುಂದಾಗುತ್ತಿದ್ದಂತೆ ಈ ವೆಬ್ಸೈಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಈ ವೆಬ್ಸೈಟ್ ಜೊತೆಗೆ ಸುಳ್ಳು ಸುದ್ದಿ ಹರಡುವಲ್ಲಿ ಅನೇಕ ಫೇಕ್ ಐಡಿಗಳ ಮೂಲಕವೂ ಪ್ರಯತ್ನ ನಡೆಸಲಾಗಿತ್ತು. ನಕಲಿ ಫೋಟೋ, ವಿಡಿಯೋ ಮೂಲಕ ಪ್ರತಿಭಟನೆಗೆ ಪ್ರಚೋದನೆ ನೀಡಿತ್ತು.
ಜೊತೆಗೆ ಈ ಎಲ್ಲಾ ಕುಕೃತ್ಯಗಳಿಗೆ ಮುಸ್ಲಿಂ ವಿದೇಶಿ ರಾಷ್ಟ್ರಗಳು ಹಣಕಾಸು ನೆರವು ನೀಡಿತ್ತು. ಜೊತೆಗೆ ಸರ್ಕಾರೇತರ ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಹ ಲಿಂಕ್ ಇರುವುದಾಗಿಯೂ ಸರ್ಕಾರಿ ಮೂಲಗಳನ್ನು ಆಧರಿಸಿ ಮಾಧ್ಯಮ ವರದಿ ಮಾಡಿದೆ.
ಇನ್ನು ಈ ಪ್ರಕರಣದ ಬಗ್ಗೆ ತನಿಖೆ ಮಾಡಿರುವ ಅಧಿಕಾರಿಗಳು, ಮೃತ ಮಹಿಳೆಯ ಮೆಡಿಟಕಲ್ ಟೆಸ್ಟ್ ರಿಪೋರ್ಟ್ ನಲ್ಲಿ ಆಘಾತ ಮತ್ತು ಗಾಯಗಳಾಗಿವೆ ಎಂದು ಆಸ್ಪತ್ರೆ ವರದಿ ನೀಡಿತ್ತು. ಅತ್ಯಾಚಾರದ ಬಗ್ಗೆ ತಿಳಿಸಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಕುಟುಂಬಸ್ಥರ ಅನುಮತಿ ಇದ್ದೇ ಪೊಲೀಸರು ಅಂತ್ಯಕ್ರಿಯೆ ನಡೆಸಿದ್ದಾಗಿಯೂ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಸಂತ್ರಸ್ಥೆಯೂ ತನ್ನ ಹೇಳಿಕೆಯಲ್ಲಿ ಹಲ್ಲೆ ಬಗ್ಗೆ ಮಾತನಾಡಿದ್ದಾಳೆ, ಅತ್ಯಾಚಾರದ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಹಿಂದೆ ಎಜಿಡಿ ಹೇಳಿದ್ದಾರೆ. ಈ ಹೇಳಿಕೆಯೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.