ಲಕ್ನೋ: ಜಗತ್ತನ್ನೇ ಕಾಡುತ್ತಿರುವ ಕೊರೋನಾವನ್ನು ನಿಯಂತ್ರಣಕ್ಕೆ ತರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಯೋಗಿ ಸರ್ಕಾರ ಮಹತ್ವದ ಮಾದರಿ ಕೆಲಸವೊಂದನ್ನು ಮಾಡಿದೆ.
ರಾಜ್ಯದಲ್ಲಿನ ಜನರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪೂರಕವಾಗುವಂತೆ ಸುಮಾರು 175 ರಸ್ತೆಗಳ ಇಕ್ಕೆಲಗಳಲ್ಲಿ ವಿವಿಧ ಗಿಡಮೂಲಿಕೆಗಳನ್ನು ನೆಡುವ ಮೂಲಕ ದೇಶಕ್ಕೆ ಮಾದರಿಯಾಗಿದೆ.
ಸುಮಾರು 38 ಸಾವಿರಕ್ಕೂ ಅಧಿಕ ಗಿಡಗಳನ್ನು ವೈವಿಧ್ಯಗಳನ್ನು 175 ರಸ್ತೆಗಳಲ್ಲಿ ನೆಡುವ ಯೋಜನೆಯನ್ನು ಯೋಗಿ ಆದಿತ್ಯನಾಥ್ ಸರ್ಕಾರ ಸಂಪೂರ್ಣಗೊಳಿಸಿದೆ. ಗಾಳಿ ಶುದ್ಧೀಕರಣ, ವಾಯುಮಾಲಿನ್ಯ ತಡೆ, ಗಾಳಿಯಲ್ಲಿ ಈ ಗಿಡಮೂಲಿಕೆಗಳ ಔಷಧೀಯ ಅಂಶಗಳು ಮಾನವನ ದೇಹದೊಳಕ್ಕೆ ಸೇರಲು ಪೂರಕವಾಗುವಂತೆ ಈ ಕೆಲಸವನ್ನು ಉತ್ತರ ಪ್ರದೇಶದ ಸರ್ಕಾರ ಮಾಡಿದೆ.
ಯೋಗಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ತುಳಸಿ, ಬೇವು, ಅಶ್ವಥ, ಅಶ್ವಗಂಧ, ಗಿಲೋಯ್, ಪುದೀನಾ, ನಿಂಬೆಹಣ್ಣು, ಅನಂತಮುಲ್, ಬ್ರಾಹ್ಮಿ, ಅರಿಶಿನ ಸೇರಿದಂತೆ ಸುಮಾರು 30 ಬಗೆಯ ಸಸ್ಯ ವೈವಿಧ್ಯವನ್ನು ಇಲ್ಲಿ ಬೆಳೆಯಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.