ನವದೆಹಲಿ: ಪುಟ್ಟ ರಾಷ್ಟ್ರವಾದ ತೈವಾನ್ ಶಕ್ತಿಶಾಲಿ ಚೀನಾದ ವಿರುದ್ಧ ತೊಡೆ ತಟ್ಟಿ ನಿಂತಿದೆ. ಚೀನಾದ ಆದೇಶಗಳಿಗೆ ಡೋಂಟ್ ಕೇರ್ ಎಂಬ ನೀತಿಯನ್ನು ಅದು ಅಳವಡಿಸಿಕೊಳ್ಳುತ್ತಿದೆ. ಇದಕ್ಕೆ ಉದಾಹರಣೆ ಭಾರತದ ಮಾಧ್ಯಮಗಳಿಗೆ ಸೆನ್ಸಾರ್ ವಿಧಿಸಲು ಚೀನಾ ನೀಡಿದ್ದ ಸೂಚನೆಗೆ ತೈವಾನ್ ನೀಡಿದ ಉತ್ತರ ಧಾಟಿ.
ತೈವಾನ್ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ಮಾಧ್ಯಮಗಳಲ್ಲಿ ಪುಟಗಟ್ಟಲೆ ಜಾಹೀರಾತು ಪ್ರಕಟವಾಗಿತ್ತು. ತೈವಾನ್ ಅನ್ನು ಪ್ರತ್ಯೇಕ ಸ್ವತಂತ್ರ ರಾಷ್ಟ್ರವಾಗಿ ಭಾರತವು ಪರಿಗಣಿಸುತ್ತಿರುವುದು ಚೀನಾಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಅದು ಭಾರತೀಯ ಮಾಧ್ಯಮಗಳಿಗೆ ಮಿತಿ ವಿಧಿಸಿಕೊಳ್ಳುವಂತೆ ಸೂಚನೆ ನೀಡಿದೆ.
“ಭಾರತೀಯ ಪತ್ರಕರ್ತರು ʼಏಕ ಚೀನಾʼ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕು. ತೈವಾನ್ ಸ್ವತಂತ್ರ ರಾಷ್ಟ್ರವಲ್ಲ, ಅದು ಚೀನಾದ ಒಂದು ಭಾಗ. ಭಾರತೀಯ ಮಾಧ್ಯಮಗಳು ತಪ್ಪು ಸಂದೇಶವನ್ನು ರವಾನಿಸಬಾರದು” ಎಂದು ನವದೆಹಲಿಯಲ್ಲಿನ ಚೀನಾ ರಾಯಭಾರ ಕಚೇರಿ ಹೇಳಿದೆ.
ಚೀನಾದ ಮಾತಿಗೆ ಪ್ರತಿಕ್ರಿಯೆ ನೀಡಿರುವ ತೈವಾನ್, “ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅದಕ್ಕೆ ತನ್ನದೇ ಆದ ಮಾಧ್ಯಮ ಸಿದ್ಧಾಂತಗಳಿವೆ. ಅವುಗಳು ಸ್ವತಂತ್ರ ವರದಿಗಾರಿಕೆಯನ್ನು ಮಾಡುತ್ತಿವೆ. ಕಮ್ಯೂನಿಸ್ಟ್ ಚೀನಾ ಭಾರತದ ಮೇಲೆ ತನ್ನ ನೀತಿಯನ್ನು ಹೇರಲು ಸಾಧ್ಯವಿಲ್ಲ. ಚೀನಾದ ಈ ಪ್ರಯತ್ನಕ್ಕೆ ತೈವಾನ್ ಮತ್ತು ಭಾರತೀಯ ಸ್ನೇಹಿತರ ಉತ್ತರ ಒಂದೆ ‘ಗೆಟ್ ಲಾಸ್ಟ್’ ಆಗಿರುತ್ತದೆ” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.