ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ 13 ನೇ ಆವೃತ್ತಿಯ ಏರೋ ಇಂಡಿಯಾ-2021 ಮುಂದಿನ ಫೆಬ್ರವರಿ 3 ರಿಂದ ಫೆ. 7 ರ ವರೆಗೆ ನಡೆಯಲಿದೆ. ಈ ಬಾರಿಯೂ ರಾಜ್ಯವೇ ಈ ಏರೋ ಇಂಡಿಯಾದ ಆತಿಥ್ಯ ವಹಿಸಿದೆ.
ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ರಾಯಭಾರಿಗಳ ನಡುವೆ ದುಂಡುಮೇಜಿನ ಸಭೆ ನಡೆದಿದ್ದು, ಈ ಸಭೆಯಲ್ಲಿ ಕರ್ನಾಟಕದ ಪರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾಗವಹಿಸಿದ್ದರು.
ಈ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ರಾಜ್ಯ ಈ ಹಿಂದೆಯೂ 12 ಏರ್ ಶೋ ಗಳಿಗೆ ಆತಿಥ್ಯ ವಹಿಸಿದ ಅನುಭವ ಹೊಂದಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯುವ ಮೆಗಾ ಅಂತರರಾಷ್ಟ್ರೀಯ ಏರ್ ಶೋ ದ ಆತಿಥ್ಯ ಕರ್ನಾಟಕದ ಪಾಲಿಗೆ ಲಭಿಸಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕರ್ನಾಟಕ ವೈಮಾನಿಕ ಮತ್ತು ಬಾಹ್ಯಾಕಾಶ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಏರೋ ಇಂಡಿಯಾವು ಭಾರತೀಯ ರಕ್ಷಣಾ ಉತ್ಪಾದನೆಗೆ, ಜಾಗತಿಕ ರಕ್ಷಣಾ ಮತ್ತು ವೈಮಾನಿಕ ವ್ಯವಸ್ಥೆಯಲ್ಲಿನ ಕಾಳಜಿ, ಕೊಡುಗೆಗಳಿಗೆ ಸಂಬಂಧಿಸಿದಂತೆ ನೀತಿ ನಿರೂಪಕರು, ಉದ್ದಿಮೆದಾರರಿಗೆ ವೇದಿಕೆ ಕಲ್ಪಿಸುತ್ತದೆ. ಜೊತೆಗೆ ರಕ್ಷಣಾ ವಿಭಾಗದಲ್ಲಿ ದೇಶ ಆತ್ಮನಿರ್ಭರದ ಕಡೆಗೆ ಹೆಜ್ಜೆ ಹಾಕುತ್ತಿದ್ದು ಈ ಹಿನ್ನಲೆಯಲ್ಲಿಯೂ ಏರ್ ಶೋ ಮಹತ್ವ ಪಡೆಯಲಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಶೋ ಗೆ ಈ ವರೆಗೆ 15 ವಿದೇಶೀ ಪ್ರದರ್ಶಕರು, 7 ದೇಶಗಳು ಮತ್ತು 84 ಭಾರತೀಯ ಪ್ರದರ್ಶಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಪ್ರದರ್ಶಕರ ನೋಂದಣಿಗೆ ಜ. 20 ಕಡೆಯ ದಿನಾಂಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.