ನವದೆಹಲಿ: ಕೋವಿಡ್-19ಗೆ ಅನುಗುಣವಾದ ಸೂಕ್ತ ರೂಢಿಯನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೇರೇಪಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ʼಜನ ಆಂದೋಲನ್ʼ ಅಭಿಯಾನವನ್ನು ಟ್ವೀಟ್ ಮೂಲಕ ಪ್ರಾರಂಭಿಸಿದ್ದಾರೆ.
ಮುಂಬರುವ ಹಬ್ಬಗಳು ಮತ್ತು ಚಳಿಗಾಲದ ಜೊತೆಗೆ ಆರ್ಥಿಕತೆಯೂ ಗಳಿಕೆ ಕಾಣುವ ದೃಷ್ಟಿಯಿಂದ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
ಕೊರೋನಾ ವಿರುದ್ಧ ಹೋರಾಡಲು ಜನರು ಒಂದಾಗಬೇಕೆಂದು ಮೋದಿ ಟ್ವೀಟ್ ನಲ್ಲಿ ಮನವಿ ಮಾಡಿದ್ದಾರೆ. ಮುಖಗವಸು ಧರಿಸುವುದು, ಕೈ ತೊಳೆಯುವುದು, ಸಾಮಾಜಿಕ ಅಂತರವನ್ನು ಅನುಸರಿಸುವುದು ಮತ್ತು ‘ಎರಡು ಗಜಗಳ ಅಂತರ’ವನ್ನು ಪಾಲಿಸುವುದನ್ನು ಜನರು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಒಟ್ಟಾಗಿ, ನಾವು ಯಶಸ್ವಿಯಾಗುತ್ತೇವೆ ಮತ್ತು ಕೋವಿಡ್-19 ವಿರುದ್ಧ ಗೆಲ್ಲುತ್ತೇವೆ ಎಂದಿದ್ದಾರೆ. “ಭಾರತದ ಕೋವಿಡ್-19 ಹೋರಾಟವು ಜನ ಚಾಲಿತವಾಗಿದೆ ಮತ್ತು ನಮ್ಮ ಕೊರೋನಾ ಯೋಧರಿಂದ ಹೆಚ್ಚಿನ ಶಕ್ತಿಯನ್ನು ಪಡೆದು ಹೋರಾಟ ಸಕ್ರಿಯವಾಗಿದೆ. ನಮ್ಮ ಸಾಮೂಹಿಕ ಪ್ರಯತ್ನಗಳು ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡಿದೆ. ನಾವು ಆ ವೇಗವನ್ನು ಮುಂದುವರಿಸಬೇಕು ಮತ್ತು ನಮ್ಮ ನಾಗರಿಕರನ್ನು ವೈರಸ್ನಿಂದ ರಕ್ಷಿಸಬೇಕು” ಎಂದಿದ್ದಾರೆ.
India’s COVID-19 fight is people driven and gets great strength from our COVID warriors. Our collective efforts have helped saved many lives. We have to continue the momentum and protect our citizens from the virus. #Unite2FightCorona pic.twitter.com/GrYUZPZc2m
— Narendra Modi (@narendramodi) October 8, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.