ನವದೆಹಲಿ: ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯ ರೋಗ ಲಕ್ಷಣವಿಲ್ಲದ ಕೊರೋನಾ ಪಾಸಿಟಿವ್ ಜನರಿಗೆ ಚಿಕಿತ್ಸೆ ನೀಡಲು ಅಧಿಕೃತ ಶಿಷ್ಟಾಚಾರಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಿಸಿ ಅರಿಶಿನ ಹಾಲು ಸೇವನೆ, ಯೋಗ ಅಭ್ಯಾಸ ಮತ್ತು ಅಶ್ವಗಂಧ ಮತ್ತು ಅಮೃತಬಳ್ಳಿ ಸೇವನೆ ಮುಂತಾದವುಗಳನ್ನು ಉಲ್ಲೇಖಿಸಲಾಗಿದೆ.
ಮೈಲ್ಡ್ ಅಥವಾ ಯಾವುದೇ ರೋಗಲಕ್ಷಣಗಳಿಲ್ಲದ ರೋಗಿಗಳ ಚಿಕಿತ್ಸೆಗಾಗಿ ಆಯುರ್ವೇದ ಮತ್ತು ಯೋಗವನ್ನು ಬಳಸುವ ಅಧಿಕೃತ ಪ್ರೋಟೋಕಾಲ್ ಇದಾಗಿದ್ದು, ನರೇಂದ್ರ ಮೋದಿ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ.
ಕೊರೋನಾವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಪರ್ಯಾಯ ಆಯುರ್ವೇದ ಔಷಧಿಗಳು ಸಹಾಯ ಮಾಡುತ್ತವೆ ಎಂದು ಸಾಂಕ್ರಾಮಿಕ ರೋಗದ ಆರಂಭದಿಂದಲೂ ಆಯುಷ್ ಸಚಿವಾಲಯವು ಹೇಳುತ್ತಲೇ ಬಂದಿದೆ.
ಪ್ರೋಟೋಕಾಲ್ ಅಶ್ವಗಂಧ, ಅಮೃತಬಳ್ಳಿ, ಪಿಪ್ಪಾಲಿ, ಆಯುಷ್ನ 64 ಮಾತ್ರೆಗಳನ್ನು ವಿವಿಧ ಪ್ರಮಾಣದಲ್ಲಿ ಬಳಸುವುದನ್ನು ಉತ್ತೇಜಿಸುತ್ತದೆ, ಮತ್ತು ಕೋವಿಡ್ ಅನ್ನು ತಡೆಗಟ್ಟಲು, ಕಡಿಮೆ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಮತ್ತು ಕೋವಿಡ್ ನಂತರದ ಸ್ವ-ಆರೈಕೆಗಾಗಿ ಯೋಗವನ್ನು ಉತ್ತೇಜಿಸುತ್ತದೆ.
ಈ ಔಷಧಿಗಳ ಜೊತೆಗೆ, ಸೂಕ್ತ ಆಹಾರ ಕ್ರಮಗಳನ್ನು ಅನುಸರಿಸಬೇಕು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ, ಇದರಲ್ಲಿ ಅರಿಶಿನ ಹಾಲು ಕುಡಿಯುವುದು, ಕಷಾಯವನ್ನು ಸೇವಿಸುವುದು, ಮೂಗಿನ ಮೂಲಕ ಕೆಳವೊಂದು ಔಷಧೀಯ ಎಣ್ಣೆಯನ್ನು ಬಿಡುವುದು ಸೇರಿದೆ.
6 ರಿಂದ 8 ಗಂಟೆಗಳಷ್ಟು ಕಾಲ ನಿದ್ರೆ ಮಾಡುವುದು ಸಹ ಶಿಫಾರಸು ಮಾಡಲಾಗಿದೆ.
Today, I released the ‘Ayush Standard Treatment Protocol’, via VC, along with MoS(I/C) @moayush @shripadynaik & Vice Chairman @NITIAayog @RajivKumar1.
It details self care guidelines for preventive health measures to help protect against #COVID19.@MoHFW_INDIA @PMOIndia pic.twitter.com/pisf28amh3
— Dr Harsh Vardhan (@drharshvardhan) October 6, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.