ನವದೆಹಲಿ: ಭಾರತದಲ್ಲಿ ಹುಲಿ ಅಭಯಾರಣ್ಯಗಳ ಮಾದರಿಯಲ್ಲಿಯೇ ಆನೆಗಳಿಗೂ ಮೀಸಲು ಅರಣ್ಯ ಪ್ರದೇಶ ರಚನೆಗೆ ಕೇಂದ್ರ ಸರ್ಕಾರ ಯೋಚಿಸಿದೆ.
ಆನೆಗಳು ಮತ್ತು ಮಾನವರ ನಡುವಿನ ಜಟಾಪಟಿ ತಪ್ಪಿಸುವ ಸಲುವಾಗಿ ಆನೆ ಮೀಸಲು ಅರಣ್ಯ ಪ್ರದೇಶ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. ಈ ಹಿನ್ನೆಲೆಯಲ್ಲಿ 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಿದೆ. ಪರಿಸರ ಸಚಿವಾಲಯವು ಈ ಕುರಿತ ಪ್ರಸ್ತಾವನೆಯನ್ನು ಸಹ ಮುಂದಿಟ್ಟಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಆನೆಗಳ ಸಂಖ್ಯೆ ಹೆಚ್ಚಾಗಿರುವ ಕರ್ನಾಟಕವೂ ಸೇರಿದಂತೆ ಹತ್ತು ರಾಜ್ಯಗಳಿಂದ ಈ ಮಹತ್ವದ ತಿದ್ದುಪಡಿಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ಕೇಂದ್ರ ಆಹ್ವಾನಿಸಿದೆ. ಹುಲಿ ಅಭಯಾರಣ್ಯಗಳಿಗೆ ಇರುವಂತೆಯೇ ಆನೆಗಳ ರಕ್ಷಿತಾರಣ್ಯಕ್ಕೂ ರಾಜ್ಯ ಸರ್ಕಾರಗಳು ರಚಿಸುವ ನಿಯಮಾವಳಿಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ದೇಶದ ಸುಮಾರು 15 ರಾಜ್ಯಗಳಲ್ಲಿ ಆನೆಗಳ ಮೀಸಲು ಅರಣ್ಯ ಸ್ಥಾಪನೆಯ ಆಶಯವನ್ನು ಹೊಂದಿರುವುದಾಗಿಯೂ ಕೇಂದ್ರ ಸರ್ಕಾರ ತಿಳಿಸಿದೆ.
ಕರ್ನಾಟಕ, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಚತ್ತೀಸ್ಘಡ, ಬಿಹಾರ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ್ ಮೊದಲಾದೆಡೆ ಆನೆ ಅಭಯಾರಣ್ಯ ಸ್ಥಾಪಿಸಲು ಸರ್ಕಾರ ಚಿಂತಿಸಿದೆ ಎಂದೂ ಪರಿಸರ ಸಚಿವಾಲಯವು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.