ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಶ್ರೀಲಂಕಾಕ್ಕೆ 50 ಮಿಲಿಯನ್ ಸಾಲವನ್ನು (ಎಲ್ಒಸಿ) ನೀಡಲು ಭಾರತ ಸಿದ್ಧತೆ ನಡೆಸಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸೆ ಅವರ ನಡುವೆ ದ್ವಿಪಕ್ಷೀಯ ಶೃಂಗಸಭೆ ನಡೆದಿದ್ದು, ಇದರಲ್ಲಿ ರಕ್ಷಣಾ ಮತ್ತು ಭದ್ರತಾ ಸಹಭಾಗಿತ್ವವನ್ನು ವಿಸ್ತರಿಸಲು ಉಭಯ ದೇಶಗಳು ನಿರ್ಧರಿಸಿವೆ.
ಭಾರತವು ಲೈನ್ ಆಫ್ ಕ್ರೆಡಿಟ್ (ಎಲ್ಒಸಿ) ಅಡಿಯಲ್ಲಿ ಲಂಕಾಕ್ಕೆ ರಕ್ಷಣಾ ಯಂತ್ರಾಂಶವನ್ನು ನೀಡುವ ಯೋಜನೆಯನ್ನು ಹೊಂದಿದೆ, ಇದು ದ್ವೀಪ ರಾಷ್ಟ್ರದ ಮಿಲಿಟರಿ ತರಬೇತಿಯ ಕಾರ್ಯಕ್ರಮವನ್ನು ವಿಸ್ತರಿಸಲಿದೆ. ಆ ದೇಶದ ಮಿಲಿಟರಿಯ ಇತರ ಶಾಖೆಗಳಿಗೆ ಹಾರ್ಡ್ವೇರ್ ಮತ್ತು ಉಪಕರಣಗಳನ್ನು ಪೂರೈಸುವ ಯೋಜನೆಗಳಿವೆ, ಜೊತೆಗೆ ನೌಕಾಪಡೆಯ ಅಗತ್ಯಗಳನ್ನು ಆಧರಿಸಿ ಸರಬರಾಜುಗಳನ್ನು ವಿಸ್ತರಿಸುವ ಚಿಂತನೆಯನ್ನೂ ಭಾರತ ನಡೆಸಿದೆ.
ವರ್ಚುವಲ್ ಆಗಿ ನಡೆದ ಶೃಂಗಸಭೆಯಲ್ಲಿ, ಇಬ್ಬರು ಪ್ರಧಾನಮಂತ್ರಿಗಳ ಜಂಟಿ ಹೇಳಿಕೆಯ ಪ್ರಕಾರ, “ರಕ್ಷಣಾ ಮತ್ತು ಸುರಕ್ಷತಾ ಕ್ಷೇತ್ರಗಳಲ್ಲಿ ಸಿಬ್ಬಂದಿ ಭೇಟಿಗಳ ಪರಸ್ಪರ ವಿನಿಮಯ, ಕಡಲ ಭದ್ರತಾ ಸಹಕಾರ ಮತ್ತು ಕ್ಷೇತ್ರಗಳಲ್ಲಿ ಶ್ರೀಲಂಕಾಕ್ಕೆ ಬೆಂಬಲ ಸೇರಿದಂತೆ ಎರಡು ಕಡೆಯ ಸಶಸ್ತ್ರ ಪಡೆಗಳ ನಡುವಿನ ಸಹಕಾರವನ್ನು ಬಲಪಡಿಸಲು ನಿರ್ಧರಿಸಲಾಗಿದೆ.
ಶೃಂಗಸಭೆಯಲ್ಲಿ, ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಭಾರತೀಯ ಭದ್ರತಾ ಸಂಸ್ಥೆಯಿಂದ ಪಡೆದ ಸಹಾಯಕ್ಕಾಗಿ ಭಾರತಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾಗೆ ಇರುವ ಭಯೋತ್ಪಾದಕ ಬೆದರಿಕೆಗಳ ಬಗ್ಗೆ ಭಾರತ ಮಾಹಿತಿ ಹಂಚಿಕೊಂಡಿರುವುದಕ್ಕೆ ಆ ದೇಶ ಧನ್ಯವಾದ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.