ತಿರುಮಲ: ನಿನ್ನೆಯಷ್ಟೇ ತಿರುಪತಿ ತಿಮ್ಮಪ್ಪನ 5 ದಿನಗಳ ಬ್ರಹ್ಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಂಧ್ರ ಪ್ರದೇಶಕ್ಕೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಅಲ್ಲಿ ಕರ್ನಾಟಕ ಯಾತ್ರಿಕರ ಭವನ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರೂ ಸಾಥ್ ನೀಡಿದರು. ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ. 2008 ರಲ್ಲಿ 50 ವರ್ಷಗಳ ಅವಧಿಗೆ ಕರ್ನಾಟಕ ಚಾರಿಟೀಸ್ಗೆ 7.5 ಎಕರೆ ಭೂಮಿಯನ್ನು ಟಿಟಿಡಿ ಗುತ್ತಿಗೆ ನೀಡಿದ್ದು, ಕಳೆದ ಜುಲೈನಲ್ಲಿ ಉಭಯ ರಾಜ್ಯಗಳ ಸರ್ಕಾರಗಳೂ ಇಲ್ಲಿ ಕರ್ನಾಟಕ ಯಾತ್ರಿಗಳ ಭವನ ನಿರ್ಮಾಣ ಕುರಿತ ಒಪ್ಪಂದ ಮಾಡಿಕೊಂಡಿದ್ದವು.
ಈ ಉದ್ದೇಶಿತ ಭವನದಲ್ಲಿ 242 ಯಾತ್ರಿಕರ ಕೊಠಡಿಗಳು, 32 ಸೂಟ್ ರೂಮ್ಗಳು, 12 ಡಾರ್ಮೆಟರಿಗಳು, ಭೋಜನ ಶಾಲೆ, ಕಲ್ಯಾಣ ಮಂಟಪ ಮೊದಲಾದವುಗಳು ಇರಲಿವೆ. ಈಗಾಗಲೇ ಇರುವ ಪುಷ್ಕರಿಣಿಯ ಪುನರುಜ್ಜೀವನಗೊಳಿಸುವುದಾಗಿಯೂ ಮೂಲಗಳು ತಿಳಿಸಿವೆ. ಈ ನಿರ್ಮಾಣ ಕಾರ್ಯವನ್ನು ಟಿಟಿಡಿಯೇ ವಹಿಸಲಿದ್ದು, ಕಾಮಗಾರಿ ಸಂಪೂರ್ಣಗೊಂಡ ಬಳಿಕ ಕರ್ನಾಟಕಕ್ಕೆ ಹಸ್ತಾಂತರ ಕಾರ್ಯ ನಡೆಯಲಿದೆ.
ಶ್ರೀವಾರಿ ಬ್ರಹ್ಮೋತ್ಸವದ ಪವಿತ್ರ ಸಂದರ್ಭದಲ್ಲಿ ಇಂದು ಬೆಳಗ್ಗೆ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಲಾಯಿತು. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಶ್ರೀ ವೈ.ಎಸ್.ಜಗನ್ ಮೋಹನ್ ರೆಡ್ಡಿ ಆತ್ಮೀಯತೆಯಿಂದ ಸ್ವಾಗತಿಸಿದರು. ದೇವಸ್ಥಾನದ ಅರ್ಚಕರು, ಟಿಟಿಡಿ ಅಧಿಕಾರಿಗಳು ಉಪಸ್ಥಿತರಿದ್ದರು.@ysjagan pic.twitter.com/GssGY15U3y
— B.S. Yediyurappa (@BSYBJP) September 24, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.