ನವದೆಹಲಿ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕೇರಳದ ಚಿನ್ನ ಕಳ್ಳಸಾಗಾಣೆ ಪ್ರಕರಣವನ್ನು ಇಂದು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಕೇರಳ ಸರ್ಕಾರದ ಸಚಿವರುಗಳು ಸ್ವಜನಪಕ್ಷಪಾತದಲ್ಲಿ ತೊಡಗಿದ್ದಾರೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ.
ಕೇರಳದಲ್ಲಿನ ಆಡಳಿತವನ್ನು ಉತ್ತರ ಕೊರಿಯಾದ ಆಡಳಿತಕ್ಕೆ ಹೋಲಿಸಿದ ಅವರು, ಪ್ರತಿಭಟನಾನಿರತ ಮಹಿಳೆಯರು ಮತ್ತು ಇತರರ ಮೇಲೆ ಪೊಲೀಸರ ದೌರ್ಜನ್ಯವನ್ನು ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ, “ಕೇರಳದ ಮುಖ್ಯಮಂತ್ರಿ ಒರ್ವ ನಿಜವಾದ ಕಮ್ಯೂನಿಸ್ಟ್. ಭಿನ್ನಾಭಿಪ್ರಾಯದ ಧ್ವನಿಗಳನ್ನು ಹುದುಗಿಸುವಲ್ಲಿ ಅವರು ಲೆನಿನ್, ಸ್ಟಾಲಿನ್, ಪೊಲ್ ಪಾಟ್ ಮತ್ತು ಕಾಸ್ಟ್ರೋವನ್ನು ಅನುಸರಿಸುತ್ತಿದ್ದಾರೆ. ಭಗವಾನ್ ಅಯ್ಯಪ್ಪ, ಆದಿ ಶಂಕರ, ಶ್ರೀ ನಾರಾಯಣ ಗುರು ಅವರನ್ನು ಕಮ್ಯೂನಿಸ್ಟ್ ನಿರಂಕುಶವಾದದಲ್ಲಿ ಬಳಲುವಂತೆ ಮಾಡಬಾರದು” ಎಂದಿದ್ದಾರೆ.
CM @vijayanpinarayi, true Communist that he is, is following Lenin, Stalin, Pol Pot & Castro in violently suppressing dissent
Land of Lord Ayyappa, Adi Shankara, Sri Narayana Guru cant be let to suffer from communist despots
My Zero Hr talk on crimes against democracy in Kerala pic.twitter.com/mum27EfHNy
— Tejasvi Surya (@Tejasvi_Surya) September 16, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.