ಅನಂತ್ನಾಗ್: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿ ಪ್ರದೇಶದಲ್ಲಿ ಕಾಶ್ಮೀರಿ ವಲಸಿಗರಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ಅನಂತ್ನಾಗ್ ಜಿಲ್ಲೆಯ ವೆಸ್ಸು ಪ್ರದೇಶದಲ್ಲಿ ವಲಸಿಗ ಪಂಡಿತ ಸಮುದಾಯಕ್ಕಾಗಿ ನಿರ್ಮಾಣವಾಗುತ್ತಿದ್ದ ವಸತಿ ನಿಲಯಗಳ ನಿರ್ಮಾಣವು ಈಗ ಪೂರ್ಣಗೊಳ್ಳುವ ಹಂತವನ್ನು ತಲುಪಿದೆ. ಯೋಜಿತ ಐದು ಕಟ್ಟಡಗಳಲ್ಲಿ ಮೂರು ಕಟ್ಟಡಗಳು ಪೂರ್ಣಗೊಂಡಿದ್ದು, ಅವುಗಳನ್ನು ವಲಸಿಗ ಪಂಡಿತ ಸರ್ಕಾರಿ ನೌಕರರಿಗೆ ನೀಡಲಾಗಿದೆ.
“ಹೊಸದಾಗಿ ನಿರ್ಮಿಸಲಾದ ಕಟ್ಟಡಗಳು ತುಂಬಾ ಉತ್ತಮವಾಗಿವೆ. ಕೋವಿಡ್-19 ಕಾರಣದಿಂದಾಗಿ ಕೆಲವು ತಿಂಗಳುಗಳವರೆಗೆ ಈ ಪ್ರಕ್ರಿಯೆಯು ನಿಧಾನವಾಗಿತ್ತು, ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿದ್ದರು. ಈಗ ಅವರು ಹಿಂತಿರುಗಿದ್ದಾರೆ ಮತ್ತು ನಿರ್ಮಾಣವು ಉತ್ತಮ ವೇಗದಲ್ಲಿ ನಡೆಯುತ್ತಿದೆ. ಇಲ್ಲಿ ಈಗ ಅನೇಕ ಕುಟುಂಬಗಳು ವಾಸಿಸುತ್ತಿವೆ ಮತ್ತು ಸಮುದಾಯದೊಂದಿಗೆ ವಾಸಿಸುತ್ತಿರುವುದಕ್ಕೆ ಅವರು ತುಂಬಾ ಸಂತೋಷವಾಗಿದ್ದಾರೆ “ಎಂದು ಸ್ಥಳೀಯ ಸರಪಂಚ್ ಹೇಳಿದ್ದಾರೆ.
“370 ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ, ಹಿಂದೆಂದೂ ಕಾಣದ ವೇಗದಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಹೆಚ್ಚು ರಾಜಕೀಯ ಹಸ್ತಕ್ಷೇಪವಿಲ್ಲ ಮತ್ತು ಕ್ಷಿಪ್ರ ಪ್ರಗತಿ ನಡೆಯುತ್ತಿದೆ. ದೇಶದ ಬೇರೆಲ್ಲಿಯಾದರೂ ಇಷ್ಟು ಕ್ಷಿಪ್ರ ಪ್ರಗತಿ ನಡೆಯುತ್ತಿದೆ ಎಂದು ನನಗೆ ಅನಿಸುತ್ತಿಲ್ಲ. ರಸ್ತೆಗಳ ನಿರ್ಮಾಣವಾಗಲಿ ಅಥವಾ ನೀರು ಸರಬರಾಜಾಗಲಿ ಎಲ್ಲವೂ ಕ್ಷಿಪ್ರವಾಗಿ ನಡೆಯುತ್ತಿವೆ. ಮೊದಲು ವಿದ್ಯುತ್ ನೋಡಿರದವರು ಈಗ 24/7 ವಿದ್ಯುತ್ ಹೊಂದಿದ್ದಾರೆ. ನಾನು ಸರ್ಕಾರಕ್ಕೆ ತುಂಬಾ ಕೃತಜ್ಞನಾಗಿದ್ದೇನೆ “ಎಂದು ಅವರು ಹೇಳಿದ್ದಾರೆ.
ಹೊಸ ಕಟ್ಟಡಗಳನ್ನು ಕೇಂದ್ರದ ಪ್ರಧಾನ ಮಂತ್ರಿಗಳ ಉದ್ಯೋಗ ಪ್ಯಾಕೇಜ್ (ಪಿಎಂಇಪಿ) ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಹೊಸ ವಸತಿ ಕಟ್ಟಡಗಳು ಕೇಂದ್ರಾಡಳಿತ ಪ್ರದೇಶದಲ್ಲಿ ವಲಸೆ ಬಂದ ಪಂಡಿತರಿಗೆ ವಾಸ ಸ್ಥಳವನ್ನು ಒದಗಿಸುತ್ತಿವೆ. ಮಾತ್ರವಲ್ಲ, ಇದು ಕೊರೋನಾ ಕಾರಣದಿಂದ ಉದ್ಯೋಗ ಕಳೆದುಕೊಂಡ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಸಹ ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.