ನವದೆಹಲಿ: ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಇದೀಗ ಪ್ರಾಚೀನ ಪವಿತ್ರ ಪಟ್ಟಣವು ದಸರಾ ಸಂಭ್ರಮಕ್ಕೆ ಸಜ್ಜಾಗಿದೆ. ಅದ್ಧೂರಿ ರಾಮ್ಲೀಲಾಗ ಕಾರ್ಯಕ್ರಮ ಅಲ್ಲಿ ನಡೆಯಲಿದ್ದು, ದೊಡ್ಡ ತಾರಾಗಣವೇ ಅಲ್ಲಿ ನೆರೆಯಲಿದೆ.
ವರದಿಗಳ ಪ್ರಕಾರ, ನಟರು ಮತ್ತು ಗಾಯಕರು ಸೇರಿದಂತೆ ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳು ಈ ವರ್ಷದ ರಾಮಲೀಲಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಬಳಿಕದ ಮೊದಲ ರಾಮಲೀಲಾ ಇದಾಗಲಿದೆ.
ಜನಪ್ರಿಯ ಭೋಜ್ಪುರಿ ಚಲನಚಿತ್ರ ತಾರೆ ಮತ್ತು ಗೋರಖ್ಪುರದ ಬಿಜೆಪಿ ಸಂಸದ ರವಿ ಕಿಶನ್, ದೆಹಲಿ ಬಿಜೆಪಿ ಸಂಸದ ಮತ್ತು ಗಾಯಕ-ನಟ ಮನೋಜ್ ತಿವಾರಿ, ನಟ ವಿಂದು ದಾರಾ ಸಿಂಗ್, ಹಿರಿಯ ನಟರಾದ ರಾಜ ಮುರಾದ್, ಶಹಬಾಜ್ ಖಾನ್, ರಿತು ಶಿವಪುರಿ ಮತ್ತು ಪ್ರಸಿದ್ಧ ಹಾಸ್ಯನಟ ಅಸ್ರಾಣಿ ‘ರಾಮಾಯಣ’ದ ವಿವಿಧ ಪಾತ್ರಗಳನ್ನು ಹಾಕಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಯೋಧ್ಯೆಯ ಐತಿಹಾಸಿಕ ಲಕ್ಷ್ಮಣ ಕೋಟೆ ದೇವಾಲಯ ಮೈದಾನದಲ್ಲಿ ಅಕ್ಟೋಬರ್ 17 ರಿಂದ 25 ರವರೆಗೆ ನಡೆಯಲಿರುವ ರಾಮ್ಲೀಲಾದಲ್ಲಿ ಸುಮಾರು 22 ಜನಪ್ರಿಯ ಬಾಲಿವುಡ್ ಗಣ್ಯರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಈ ಸೆಲೆಬ್ರಿಟಿಗಳು 9 ದಿನಗಳ ಕಾರ್ಯಕ್ರಮದಲ್ಲಿ ರಾಮಾಯಣದ ವಿವಿಧ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಘಟನಾ ಸಮಿತಿಯ ಸದಸ್ಯರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.