ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಸಂದರ್ಭದಲ್ಲಿ ಕಲಾವಿದ ಸಮುದಾಯಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಡಿ ಒಟ್ಟು 5,462.69 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ.
ಲೋಕಸಭೆಯಲ್ಲಿ ರಾಜ್ಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ (ಸ್ವತಂತ್ರ ಉಸ್ತುವಾರಿ) ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಈ ಬಗ್ಗೆ ಲಿಖಿತ ಉತ್ತರವನ್ನು ನೀಡಿದ್ದು, ವಲಯವಾರು ಸಾಂಸ್ಕೃತಿಕ ಕೇಂದ್ರಗಳು ಕೂಡ ಈ ಹಂತದಲ್ಲಿ ಕಲಾವಿದರಿಗೆ 927.83 ಲಕ್ಷ ರೂ.ಹಣಕಾಸು ನೆರವು ನೀಡಿದೆ ಎಂದಿದ್ದಾರೆ.
ಬೌದ್ಧ / ಟಿಬೆಟಿಯನ್ ಕಲೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿನ ಯೋಜನೆ, ರೆಪರ್ಟರಿ ಗ್ರಾಂಟ್ ಯೋಜನೆ, ಸಾಂಸ್ಕೃತಿಕ ಕಾರ್ಯ ಮತ್ತು ಉತ್ಪಾದನೆಗೆ ಅನುದಾನ ನೀಡುವ ಹಣಕಾಸು ನೆರವು ಯೋಜನೆ ಮುಂತಾದ ಯೋಜನೆಗಳ ಅಡಿಯಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.
ಇದಲ್ಲದೆ, ಸಂಗೀತ ನಾಟಕ ಅಕಾಡೆಮಿ (ಎಸ್ಎನ್ಎ) ಈ ಹಂತದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದು ವಿವಿಧ ಪ್ರಕಾರಗಳ ಕಲಾವಿದರಿಗೆ ಪ್ರಯೋಜನವನ್ನು ನೀಡಿತು ಎಂದಿದ್ದಾರೆ.
ಏಳು ಸಾಂಸ್ಕೃತಿಕ ಕೇಂದ್ರಗಳು ಆನ್ಲೈನ್ ಕಾರ್ಯಕ್ರಮಗಳನ್ನು ಸಹ ಆಯೋಜಿಸಿದವು, ಅಲ್ಲಿ ಜಾನಪದ ಮತ್ತು ಬುಡಕಟ್ಟು ಕಲಾವಿದರು ತಮ್ಮ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು, ಇದಕ್ಕಾಗಿ ಅವರಿಗೆ ಸಂಭಾವನೆ ನೀಡಲಾಯಿತು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.