ನವದೆಹಲಿ: ರಾಜ್ಯಸಭಾ ಉಪಾಧ್ಯಕ್ಷರಾಗಿ ಎನ್ಡಿಎ ಅಭ್ಯರ್ಥಿ ಜೆಡಿಯು ಪಕ್ಷದ ಸಂಸದ ಹರಿವಂಶ್ ನಾರಾಯಣ್ ಸಿಂಗ್ ಅವರನ್ನು ಮೇಲ್ಮನೆ ಆಯ್ಕೆ ಮಾಡಿದೆ. ಸತತ ಎರಡನೇ ಬಾರಿಗೆ ಆಯ್ಕೆಯಾಗಿರುವ ಸಿಂಗ್ ಅವರು ಆರ್ಜೆಡಿ ಸಂಸದ ಮನೋಜ್ ಜಾ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದಾರೆ. ಪ್ರತಿಪಕ್ಷ 61 ಸ್ಥಾನಗಳನ್ನು ಹೊಂದಿದ್ದು, ಎನ್ಡಿಎ 116 ಸ್ಥಾನಗಳನ್ನು ಹೊಂದಿದ್ದರಿಂದ ಸಿಂಗ್ ಪರವಾಗಿ ಹೆಚ್ಚು ಮತಗಳು ಬಿದ್ದವು.
ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸಲು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರನ್ನು ಸಂಪರ್ಕಿಸಿದ್ದರು. ಎನ್ಡಿಎ ಅಲ್ಲದ ಪಕ್ಷಗಳಾದ ಬಿಜೆಡಿ ಮತ್ತು ವೈಎಸ್ಆರ್ಸಿಪಿ ಸಿಂಗ್ಗೆ ಬೆಂಬಲ ನೀಡಿದೆ, ಎಎಪಿ, ಎಸ್ಪಿ, ಸಿಪಿಐ (ಎಂ) ಮತ್ತು ಶಿವಸೇನೆಗಳು ಪ್ರತಿಪಕ್ಷದ ಅಭ್ಯರ್ಥಿಗಳು ಆರ್ಜೆಡಿಯ ಮನೋಜ್ ಜಾ ಅವರಿಗೆ ಬೆಂಬಲ ನೀಡಿದವು. ಟಿಆರ್ಎಸ್ ಮತದಾನದಿಂದ ದೂರವಿತ್ತು.
ವೃತ್ತಿಯಲ್ಲಿ ಪತ್ರಕರ್ತರಾಗಿದ್ದ ಸಿಂಗ್, ಪ್ರಭಾತ್ ಖಬರ್ ಪತ್ರಿಕೆ ಸಂಪಾದಕರಾಗಿ ಕೆಲಸ ಮಾಡಿದವರು ಮತ್ತು ಭಾರತದ ಎಂಟನೇ ಪ್ರಧಾನಿ ಚಂದ್ರ ಶೇಖರ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಸಮಾಜವಾದಿ ಐಕಾನ್ ಜೈ ಪ್ರಕಾಶ್ ನಾರಾಯಣ್ ಅವರ ಜನ್ಮಸ್ಥಳ – ಸೀತಾಬ್ ದಿಯಾರಾದಲ್ಲಿ 1956 ರಲ್ಲಿ ಜನಿಸಿದ ಸಿಂಗ್ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಏಪ್ರಿಲ್ 2014 ರಲ್ಲಿ ರಾಜ್ಯಸಭೆಗೆ ಚುನಾಯಿತರಾದ ಸಿಂಗ್ ನಿತೀಶ್ ಕುಮಾರ್ ಅವರ ಆಪ್ತ.
I declare that Harivansh ji has been chosen as the deputy chairman of the Rajya Sabha: Rajya Sabha Chairman M.Venkaiah Naidu
A voice vote was conducted for the election of Rajya Sabha deputy chairman. https://t.co/WfOGvFHqxq pic.twitter.com/nBshcec7p6
— ANI (@ANI) September 14, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.