ಜೈಪುರ: ರಾಜಸ್ಥಾನದ ಅನುಪ್ಗಢ ಸೆಕ್ಟರ್ನಲ್ಲಿ ಪಾಕಿಸ್ಥಾನದ ಇಬ್ಬರು ಮಾದಕ ದ್ರವ್ಯ ಕಳ್ಳಸಾಗಾಣೆದಾರರನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಬುಧವಾರ ಗುಂಡಿಕ್ಕಿ ಕೊಂದಿದೆ ಎಂದು ಮೂಲಗಳು ವರದಿ ಮಾಡಿವೆ.
ಕಳ್ಳಸಾಗಾಣೆದಾರರು ಅಂತರರಾಷ್ಟ್ರೀಯ ಗಡಿಯನ್ನು ಅತಿಕ್ರಮಿಸಲು ಮತ್ತು ಎಂಟು ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ನಂತರ ಇಬ್ಬರನ್ನೂ ಗುಂಡಿಕ್ಕಿ ಯೋಧರು ಸಂಹಾರ ಮಾಡಿದ್ದಾರೆ. ಅವರ ಬಳಿ ಇದ್ದ ಎರಡು ಪಿಸ್ತೂಲ್ ಮತ್ತು ಬೈನಾಕ್ಯುಲರ್ಗಳನ್ನುವಶಪಡಿಸಿಕೊಳ್ಳಲಾಗಿದೆ.
ಹತರಾದ ಇಬ್ಬರಲ್ಲಿ ಒಬ್ಬನನ್ನು ಶಹಬಾಜ್ ಅಲಿ ಎಂದು ಗುರುತಿಸಲಾಗಿದೆ ಮತ್ತು ಅತನ ಬಳಿ ಪಾಕಿಸ್ಥಾನದ ರಾಷ್ಟ್ರೀಯ ಗುರುತಿನ ಚೀಟಿ ಪತ್ತೆಯಾಗಿದೆ. ಇವರು ಗಡಿ ಬೇಲಿಯಾಚೆ ಐದು ಡ್ರಗ್ಸ್ ಪ್ಯಾಕೆಟ್ಗಳನ್ನು ಎಸೆದಿದ್ದರು. ಬಳಿಕ ಗಡಿ ದಾಟಲು ಪ್ರಯತ್ನಿಸುತ್ತಿದ್ದಂತೆ ಅವರನ್ನು ಬಿಎಸ್ಎಫ್ ಹೊಡೆದುರುಳಿಸಿದೆ.
ಇಬ್ಬರು ಕಳ್ಳಸಾಗಾಣಿಕೆದಾರರು ಹಿಂದಕ್ಕೆ ಓಡಿಹೋಗಲು ಪ್ರಯತ್ನಿಸಿದಾಗ ಭಾರತೀಯ ಪಡೆಗಳು ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಇವರ ಮೃತದೇಹವನ್ನು ಸ್ವೀಕರಿಸಲು ಪಾಕಿಸ್ಥಾನ ರೇಂಜರ್ಸ್ ಗಳು ನಿರಾಕರಿಸಿದ್ದಾರೆ. ಹೀಗಾಗಿ ಬಿಎಸ್ಎಫ್ನ ಸೈನಿಕರು ಅವರ ಅಂತಿಮ ವಿಧಿಗಳನ್ನು ನೆರವೇರಿಸಿದ್ದಾರೆ.
ಮಾದಕವಸ್ತುಗಳನ್ನು ಅಕ್ರಮವಾಗಿ ಭಾರತಕ್ಕೆ ನುಸುಳಿಸಲು ಇಂತಹ ಅನೇಕ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ, ಹೀಗಾಗಿ ಬಿಎಸ್ಎಫ್ ನಿಯಮಿತವಾಗಿ ಕಣ್ಗಾವಲನ್ನು ಇರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.