ಅಹ್ಮದಾಬಾದ್: ಕೋವಿಡ್-19 ಕಾರಣದಿಂದ ಜನರು ಕೆಲಸಗಳನ್ನು ಕಳೆದುಕೊಳ್ಳುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ . ಆದರೆ ಇದು ದೃಷ್ಟಿ ವಿಕಲಚೇತನ ಥಕ್ಕರ್ ಅಶ್ವಿನ್ ಮತ್ತು ಅವರ ಪತ್ನಿಯ ಮನೋಸ್ಥೈರ್ಯವನ್ನು ಕುಗ್ಗಿಸಲಿಲ್ಲ. ಕರೋನವೈರಸ್ ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡ ನಂತರ, ಅಹಮದಾಬಾದ್ ಮೂಲದ ಅಶ್ವಿನ್ ಮತ್ತು ಅವರ ಪತ್ನಿ ಗೀತಾ ಸ್ವತಂತ್ರವಾಗಿ ಬದುಕುವ ಪ್ರಯತ್ನದಲ್ಲಿ ಮನೆಯಲ್ಲಿ ರುಚಿಯಾದ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿ ಇಂದು ಯಶಸ್ವಿಯಾಗಿದ್ದಾರೆ.
ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ್’ ದೃಷ್ಟಿಯಂತೆಯೇ ತಾನು ‘ಆತ್ಮನಿರ್ಭರ’ ಆಗಲು ಕಲಿತಿದ್ದೇನೆ ಎಂದು ಥಕ್ಕರ್ ಹೇಳುತ್ತಾರೆ. ನಿಜಕ್ಕೂ ಅವರಿಂದು ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. ಈ ಮೂಲಕ ಇತರರಿಗೆ ಮಾದರಿ ಎನಿಸಿಕೊಂಡಿದ್ದಾರೆ.
ತಮ್ಮ ಯಶೋಗಾಥೆಯ ಬಗ್ಗೆ ಮಾತನಾಡಿದ ಅವರು, “ನಾನು ಸ್ವತಂತ್ರನಾಗಿರಲು ಬಯಸುತ್ತೇನೆ. ಕೋವಿಡ್-19 ಲಾಕ್ಡೌನ್ ಅನ್ನು ತೆಗೆದುಹಾಕಿದ ಬಳಿಕ ಜನರು ಇತರ ಉದ್ಯೋಗಗಳನ್ನು ಕಂಡುಕೊಳ್ಳಲು ಆರಂಭಿಸಿದ್ದಾರೆ, ದೃಷ್ಟಿಹೀನರಾದ ನನ್ನಂತವರು ಕೂಡ ಏನಾದರೂ ಮಾಡಲೇ ಬೇಕಲ್ಲವೇ. ನಾನು ನನ್ನ ಯೋಜನೆಯನ್ನು ಕೆಲವು ಜನರೊಂದಿಗೆ ಚರ್ಚಿಸಿದೆ, ನನ್ನ ಸ್ನೇಹಿತರು ಈ ಹೆಜ್ಜೆ ಇಡಲು ನನ್ನನ್ನು ಪ್ರೋತ್ಸಾಹಿಸಿದರು. ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡಿತು. ಮುಂದಿನ 6 ತಿಂಗಳಲ್ಲಿ ನಾನು ಅಂಗಡಿಯೊಂದನ್ನು ಪ್ರಾರಂಭಿಸಲು ಬಯಸುತ್ತಿದ್ದೇನೆ “ಎಂದು ಥಕ್ಕರ್ ಅಶ್ವಿನ್ ಹೇಳಿಳುತ್ತಾರೆ.
“ಇಂದು ಕೆಲಸ ಕಳೆದುಕೊಂಡರೂ ನಾನು ಸ್ವತಂತ್ರನಾಗಿದ್ದೇನೆ. ಬಾಡಿಗೆ ಸೇರಿದಂತೆ ನನ್ನ ಮನೆಯ ಖರ್ಚುಗಳನ್ನು ನೋಡಿಕೊಳ್ಳಲು ನಾನು ಸಾಕಷ್ಟು ಸಂಪಾದಿಸುತ್ತಿದ್ದೇನೆ. ‘ಆತ್ಮನಿರ್ಭರ’ ಆಗುವುದು ಹೇಗೆ ಎಂದು ನಾನು ಕಲಿತಿದ್ದೇನೆ. ಇತರರ ಮೇಲೆ ಅವಲಂಬಿತನಾಗದಿರಲು ನಾನು ದೃಢವಾಗಿ ನಿಶ್ಚಯಿಸಿದ್ದೇನೆ. ಅನೇಕ ಜನರು ನನ್ನನ್ನು ಬೆಂಬಲಿಸುತ್ತಿದ್ದಾರೆ” ಎಂದಿದ್ದಾರೆ.
ಅಶ್ವಿನ್ ಅವರ ಕಾರ್ಯಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ವಿವಿಧ ಜನರು ಈ ವ್ಯಕ್ತಿಯ ಧೈರ್ಯಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಪಿಎಂ ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ’ ಅಭಿಯಾನವನ್ನು ಶ್ಲಾಘಿಸಿದ್ದಾರೆ. ಕೆಲವರು ಅಶ್ವಿನ್ ಅವರನ್ನು ಭೇಟಿಯಾಗಿ ಅವರಿಂದ ತಿಂಡಿಗಳನ್ನು ಖರೀದಿಸಲು ಬಯಸಿದ್ದಾರೆ. ಅವರ ತಿಂಡಿಗಳನ್ನು ಆನ್ಲೈನ್ನಲ್ಲಿ ಖರೀದಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.