ನವದೆಹಲಿ: ಗ್ರಾಮಗಳು ಆತ್ಮ ನಿರ್ಭರ ಭಾರತದ ಸ್ತಂಭಗಳಾಗಬೇಕು, ಇದರಿಂದ ಗ್ರಾಮಗಳು ಇನ್ನಷ್ಟು ಸಮೃದ್ಧಗೊಳ್ಳುತ್ತವೆ ಮತ್ತು ಬಲಿಷ್ಠವಾಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಡಿಜಿಟಲ್ ಆಗಿ ಅನಾವರಣಗೊಳಿಸಿ ಅವರು ಮಾತನಾಡಿದರು.
“ಇಂದು ಚಾಲನೆಗೊಂಡ ಉಪಕ್ರಮದ ಮುಖ್ಯ ಉದ್ದೇಶವೆಂದರೆ ಗ್ರಾಮಗಳನ್ನು ಆತ್ಮನಿರ್ಭರ ಭಾರತದ ಸ್ತಂಭಗಳನ್ನಾಗಿ ಮಾಡುವುದು. ನೀಲಿ ಕ್ರಾಂತಿ ಎಂದರೆ ಮೀನುಗಾರಿಕೆಗೆ ಸಂಬಂಧಿಸಿದ್ದು, ಶ್ವೇತ ಕ್ರಾಂತಿಯೆಂದರೆ ಹೈನುಗಾರಿಕೆಗೆ ಸಂಬಂಧಿಸಿದ್ದು, ಸಿಹಿ ಕ್ರಾಂತಿಯೆಂದರೆ ಜೇನು ಉತ್ಪಾದನೆಗೆ ಸಂಬಂಧಿಸಿದ್ದು. ಈ ಪ್ರಯತ್ನ ಶತಮಾನಗಳಿಂದಲೂ ನಡೆಯುತ್ತಿದೆ. ಗ್ರಾಮಗಳನ್ನು ಸಮೃದ್ಧಗೊಳಿಸಲು ಮತ್ತು ಇನ್ನಷ್ಟು ಬಲಿಷ್ಠಗೊಳಿಸಲು ಇದು ಮುಖ್ಯ” ಎಂದಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಇ-ಗೋಪಾಲ ಅಪ್ಲಿಕೇಶನ್ ಅನ್ನು ಕೂಡ ರೈತರಿಗಾಗಿ ಅನಾವರಣಗೊಳಿಸಿದರು. ಇದರ ಜೊತೆಜೊತೆಗೆ ಬಿಹಾರದ ಮೀನುಗಾರಿಕೆ ಮತ್ತು ಪಶುಸಂಗೋಪನೆ ವಲಯಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳಿಗೆ ಅವರು ಚಾಲನೆ ನೀಡಿದ್ದಾರೆ.
“ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮಹತ್ವದ ಗುರಿಯನ್ನು ಇಟ್ಟುಕೊಂಡು ಆರಂಭ ಮಾಡಲಾಗಿದೆ. ಇಂದು ಯೋಜನೆಯನ್ನು ದೇಶದ 21 ರಾಜ್ಯಗಳಲ್ಲಿ ಆರಂಭಿಸಲಾಗಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಇದಕ್ಕಾಗಿ 20 ಸಾವಿರ ಕೋಟಿಗಳನ್ನು ವ್ಯಯಿಸಲಾಗುತ್ತದೆ. ಇದರಲ್ಲಿ, 1,700 ಕೋಟಿ ರೂಪಾಯಿಯ ಕಾರ್ಯವನ್ನು ಇಂದು ಚಾಲನೆಗೊಳಿಸಲಾಗುತ್ತದೆ” ಎಂದಿದ್ದಾರೆ.
“ದೇಶದ ಮೂಲೆ ಮೂಲೆಯ ಮೀನುಗಾರಿಕೆಯನ್ನು, ಸಮುದ್ರ ಮತ್ತು ನದಿ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಇದೇ ಮೊದಲ ಬಾರಿಗೆ ಇಂತಹ ದೊಡ್ಡ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮೇಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗುತ್ತಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.