ನವದೆಹಲಿ: ಜಿಡಿಪಿಗೆ ಎಂಎಸ್ಎಂಇ ಕೊಡುಗೆಯನ್ನು ಶೇಕಡಾ 30 ರಿಂದ 50 ಕ್ಕೆ ಮತ್ತು ರಫ್ತುಗಳನ್ನು ಶೇ 49 ರಿಂದ ಶೇ 60 ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಆತ್ಮನಿರ್ಭರ ಭಾರತ ಅರೈಸ್ ಅಟಲ್ ನ್ಯೂ ಇಂಡಿಯಾ ಚಾಲೆಂಜ್ ಆರಂಭದ ಸಲುವಾಗಿ ನೀತಿ ಆಯೋಗ ಆಯೋಜಿಸಿದ್ದ ವರ್ಚುವಲ್ ಮೀಟ್ನಲ್ಲಿ ಮಾತನಾಡಿದ ಗಡ್ಕರಿ, ಎಂಎಸ್ಎಂಇ ವಲಯದಲ್ಲಿ 5 ಕೋಟಿ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ, ಇದು ಪ್ರಸ್ತುತ ಸುಮಾರು 11 ಕೋಟಿ ಜನರಿಗೆ ಉದ್ಯೋಗ ನೀಡುತ್ತಿದೆ ಎಂದಿದ್ದಾರೆ.
ನಿತಿ ಅಯೋಗದ ಆತ್ಮನಿರ್ಭರ ಭಾರತ ಅರೈಸ್ ಅಟಲ್ ನ್ಯೂ ಇಂಡಿಯಾ ಚಾಲೆಂಜ್ ಉಪಕ್ರಮವನ್ನು ಗಡ್ಕರಿ ಶ್ಲಾಘಿಸಿದರು ಮತ್ತು ಮೌಲ್ಯವರ್ಧನೆಯನ್ನು ಖಾತ್ರಿಪಡಿಸುವ ವಿವಿಧ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ತಂತ್ರಜ್ಞಾನವನ್ನು ಬಳಸಬೇಕೆಂದು ಅವರು ಕರೆ ನೀಡಿದರು.
ಎಥೆನಾಲ್ ಉತ್ಪಾದನೆಗೆ ಬಳಸಬಹುದಾದ ಹೆಚ್ಚುವರಿ ಅಕ್ಕಿಯ ವಿಷಯವನ್ನು ಉಲ್ಲೇಖಿಸಿದ ಅವರು, ಇದರಿಂದ ಒಂದು ಕಡೆ ಶೇಖರಣೆಯ ಸಮಸ್ಯೆಯನ್ನು ಪರಿಹರಿಸಬಹುದು ಮತ್ತು ಇನ್ನೊಂದೆಡೆ ಆಮದು ಬದಲಿಯಾಗಿ ದೇಶಕ್ಕೆ ಹಸಿರು ಇಂಧನವನ್ನು ಒದಗಿಸಬಹುದು. ನಾವೀನ್ಯತೆಗಳಲ್ಲಿ ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಅಥವಾ ಹೊಸ ಪರಿಹಾರಗಳನ್ನು ಕಂಡುಕೊಳ್ಳುವಿಕೆಯನ್ನು ಉತ್ತೇಜಿಸುವ ಅಗತ್ಯವಿದೆ ಮತ್ತು ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವವರನ್ನು ರಕ್ಷಿಸಬೇಕಾಗಿದೆ ಎಂದು ಅವರು ಹೇಳಿದರು.
115 ಮಹತ್ವಾಕಾಂಕ್ಷೆಯ ಜಿಲ್ಲೆಗಳು ಸೇರಿದಂತೆ ಹಿಂದುಳಿದ ಮತ್ತು ಬುಡಕಟ್ಟು ಪ್ರದೇಶಗಳನ್ನು ಬೆಳವಣಿಗೆಯ ಪಥದಲ್ಲಿ ತಂದಾಗ ದೇಶದ ಬೆಳವಣಿಗೆ ಮತ್ತಷ್ಟು ವೇಗಗೊಳ್ಳುತ್ತದೆ ಎಂದು ಗಡ್ಕರಿ ಒತ್ತಿ ಹೇಳಿದರು. ನಾವೀನ್ಯತೆಗಳು ಮತ್ತು ಉದ್ಯಮಶೀಲತೆಗೆ ಬ್ರಾಡ್ಬೆಸಿಂಗ್ ಬೆಂಬಲವನ್ನು ಅವರು ಪ್ರತಿಪಾದಿಸಿದರು, ಇದರಿಂದಾಗಿ ಹೊಸ ಪ್ರತಿಭೆಗಳು ಬೆಳೆಯಲು ಅವಕಾಶ ಸಿಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.