ನವದೆಹಲಿ: ಜನರ ಮಾನಸಿಕ ಸ್ವಾಸ್ಥ್ಯ ಕಾಪಾಡುವುದಕ್ಕೆ ಸಂಬಂಧಿಸಿದಂತೆ 24×7 ಸಹಾಯವಾಣಿ ಕಿರಣ್ಗೆ ಕೇಂದ್ರ ಸಚಿವ ತಾವರ್ಚಂದ್ ಗೆಹ್ಲೋಟ್ ಅವರು ಚಾಲನೆ ನೀಡಿದರು. 1800-599-0019 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಸುಮಾರು 13 ಭಾಷೆಗಳಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಪೂರ್ವ ಸ್ಕ್ರೀನಿಂಗ್, ಪ್ರಥಮ ಚಿಕಿತ್ಸೆ, ಮಾನಸಿಕವಾಗಿ ಸದೃಢಗೊಳಿಸುವುದು, ಡಿಸ್ಟ್ರೆಸ್ ಮೈಂಟೈನ್, ಮಾನಸಿಕ ಸ್ಥೀಮಿತ, ಸಕಾರಾತ್ಮಕ ಚಿಂತನೆಗಳನ್ನು ಉತ್ತೇಜಿಸುವುದು ಮೊದಲಾದ ಕಾರಣಗಳಿಗೆ ಸಂಬಂಧಿಸಿದಂತೆ ಅಗತ್ಯವುಳ್ಳ ಜನರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಸಹಾಯವಾಣಿಗೆ ಕೇಂದ್ರ ಸರ್ಕಾರ ರೂಪುರೇಶೆ ನೀಡಿದೆ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಸಹಾಯವಾಗುವಂತೆ ಪೂರಕ ಸಮಾಲೋಚನೆಯ ಮೂಲಕ ಅಗತ್ಯ ನೆರವನ್ನು ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಂಘ ಸಂಸ್ಥೆಗಳು ಸೇರಿದಂತೆ ಇನ್ನಿತರ ಜನರಿಗೆ ಒದಗಿಸಲು ಈ ಸೇವೆಗೆ ಚಾಲನೆ ನೀಡಲಾಗಿದೆ. ಸುಮಾರು 13 ಭಾಷೆಗಳಲ್ಲಿ ಇದು ಕಾರ್ಯ ನಿರ್ವಹಿಸಲಿದೆ.
ಮಾನಸಿಕ ಸಮಸ್ಯೆಯಿಂದ, ಜಂಜಡಗಳಿಂದ ಬಳಲುತ್ತಿರುವ ಜನರಿಗೆ ಈ ಸಹಾಯವಾಣಿ ನೆರವಾಗುತ್ತದೆ ಎಂಬ ಭರವಸೆಯನ್ನು ಗೆಹ್ಲೋಟ್ ವ್ಯಕ್ತಪಡಿಸಿದ್ದಾರೆ. ಈ ಸಹಾಯವಾಣಿಯನ್ನು 668 ಮಾನಸಿಕ ತಜ್ಞರು ಮತ್ತು 660 ಕ್ಲಿನಿಕಲ್ ರಿಹಾಬಿಲಿಟೇಷನ್ಗಳು ಬೆಂಬಲಿಸಿವೆ. ಈ ಸಹಾಯವಾಣಿ ಬಿಎಸ್ಎನ್ಎಲ್ನ ಎಲ್ಲಾ ರೀತಿಯ ಸಮನ್ವಯ ಸಹಕಾರದೊಂದಿಗೆ 24×7 ಕಾರ್ಯ ನಿರ್ವಹಿಸಲಿದ್ದು, ಹಿಂದಿ, ಅಸ್ಸಾಮಿ, ತಮಿಳು, ಮರಾಠಿ, ಒಡಿಯಾ, ತೆಲುಗು, ಮಲಯಾಳಂ, ಗುಜರಾತಿ, ಪಂಜಾಬಿ, ಕನ್ನಡ, ಬಂಗಾಳಿ, ಉರ್ದು ಮತ್ತು ಇಂಗ್ಲಿಷ್ ಗಳಲ್ಲಿ ಮಾಹಿತಿ ನೀಡಲಿದೆ.
ಕರೆ ಮಾಡಿದವರಿಗೆ ಭಾಷೆಯ ಆಯ್ಕೆಗೆ ಅವಕಾಶವಿದ್ದು, ನಂತರ ಅವರ ಸಮಸ್ಯೆ ಪರಿಹಾರಕ್ಕೆ ತಜ್ಞರ ಜೊತೆಗೆ ನೇರ ಸಂಪರ್ಕಕ್ಕೆ ಒಳಪಡಿಸಲಾಗುವುದು. ಈ ಸಹಾಯವಾಣಿಯಿಂದ ಖಿನ್ನತೆ, ಒತ್ತಡ ನಿವಾರಣೆ, ಆತ್ಮಹತ್ಯೆಯಂತಹ ಯೋಚನೆ ತಡೆಯಲು ಸೇರಿದಂತೆ ಇನ್ನಿತರ ಸಮಸ್ಯೆಗಳಿಗೂ ಪರಿಹಾರ ಒದಗಿಸಲಾಗುತ್ತದೆ. ಈ ಹೆಲ್ಪ್ಲೈನ್ ಅನ್ನು ಚೆನ್ನೈನ ಎನ್ಐಇಪಿಎಂಡಿ ಮತ್ತು ಸೆಹೋರ್ನ ಎನ್ಐಎಂಹೆಚ್ಆರ್ ಸಂಯೋಜಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.