ನವದೆಹಲಿ: ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್ಜಿಎಸ್) ಅಡಿಯಲ್ಲಿ ಎಂಎಸ್ಎಂಇಗಳಿಗೆ ಬ್ಯಾಂಕುಗಳು ಈವರೆಗೆ 1.61 ಲಕ್ಷ ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿವೆ ಎಂದು ಸರ್ಕಾರ ಸೋಮವಾರ ತಿಳಿಸಿದೆ.
“ಸೆಪ್ಟೆಂಬರ್ 03, 2020 ರ ಹೊತ್ತಿಗೆ, ಸಿಎಸ್ಬಿಗಳು ಮತ್ತು ಖಾಸಗಿ ಬ್ಯಾಂಕುಗಳು 100% ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯಡಿ ಮಂಜೂರು ಮಾಡಿದ ಒಟ್ಟು ಮೊತ್ತವು 1,61,017.68 ಕೋಟಿ ರೂ. ಆಗಿದ್ದು, ಅದರಲ್ಲಿ 1,13,713.15 ಕೋಟಿ ರೂ. ಈಗಾಗಲೇ ವಿತರಿಸಲಾಗಿದೆ” ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಕಚೇರಿ ಟ್ವಿಟ್ ಮಾಡಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳು ಈ ಯೋಜನೆಯಡಿ ಈವರೆಗೆ 78,067.21 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಸೆಪ್ಟೆಂಬರ್ 3 ರವರೆಗೆ 62,025.79 ಕೋಟಿ ರೂ.ವಿತರಣೆ ಮಾಡಿವೆ.
“24 ಆಗಸ್ಟ್ 2020 ಕ್ಕೆ ಹೋಲಿಸಿದರೆ, ಮಂಜೂರಾದ ಸಾಲಗಳ ಒಟ್ಟು ಮೊತ್ತದಲ್ಲಿ 5,022.06 ಕೋಟಿ ರೂ.ಗಳ ಹೆಚ್ಚಳವಾಗಿದೆ ಮತ್ತು ಸೆಪ್ಟೆಂಬರ್ 2020 ರ ವೇಳೆಗೆ ಪಿಎಸ್ಬಿಗಳು ಮತ್ತು ಖಾಸಗಿ ವಲಯದ ಬ್ಯಾಂಕುಗಳು ವಿತರಿಸಿದ ಸಾಲಗಳ ಒಟ್ಟು ಮೊತ್ತದಲ್ಲಿ 7,786.16 ಕೋಟಿ ರೂ.ಹೆಚ್ಚಳವಾಗಿದೆ” ಎಂದು ಟ್ವೀಟ್ ಹೇಳಿದೆ.
ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ ಮೇ ತಿಂಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ 20 ಲಕ್ಷ ಕೋಟಿ ರೂ.ಗಳ ಆತ್ಮನಿರ್ಭರ ಭಾರತ ಮಿಷನ್ ಪ್ಯಾಕೇಜ್ನ ಅತಿದೊಡ್ಡ ಹಣಕಾಸಿನ ಅಂಶವಾಗಿದೆ.
ಪ್ರಸಕ್ತ ಕಷ್ಟದ ಅವಧಿಯಲ್ಲಿ ಎಂಎಸ್ಎಂಇ ವಿಭಾಗಕ್ಕೆ ಸಮರ್ಪಕ ದ್ರವ್ಯತೆಯನ್ನು ಒದಗಿಸುವ ಉದ್ದೇಶವನ್ನು ಈ ಯೋಜನೆ ಸಾಧಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು, ಹಣಕಾಸು ಸಚಿವಾಲಯವು ನಿಯಮಿತವಾಗಿ ಬ್ಯಾಂಕುಗಳೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.