ಬೆಂಗಳೂರು: ಯಕ್ಷಗಾನ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಮತ್ತು ಇಂದಿನ ಯುವ ಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಯಕ್ಷಗಾನ ವಿಶ್ವಕೋಶ’ ವನ್ನು ಹೊರತರಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಯೋಜನೆ ರೂಪಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಅಕಾಡೆಮಿಯ ಅಧ್ಯಕ್ಷ ಪ್ರೊ | ಎಂ. ಎ. ಹೆಗಡೆ ಅವರ ನೇತೃತ್ವದಲ್ಲಿ ಅಕಾಡೆಮಿಯ ಎಲ್ಲಾ ಸದಸ್ಯರು ಚರ್ಚೆ ನಡೆಸಿದ್ದು, ವಿಶ್ವಕೋಶವನ್ನು ಹೊರತರುವ ಸಂಬಂಧ ತೀರ್ಮಾನ ಕೈಗೊಂಡಿದ್ದಾರೆ. ಬಳಿಕ ಸರ್ಕಾರಕ್ಕೂ ಪ್ರಸ್ತಾವನೆಯನ್ನು ಕಳುಹಿಸಿಕೊಡಲಾಗಿದೆ. ಈ ವಿಶ್ವಕೋಶ ತಯಾರಿಯ ಸಂಪಾದಕೀಯ ಮಂಡಳಿಯ ನೇತೃತ್ವವನ್ನು ಅಕಾಡೆಮಿಯ ಸದಸ್ಯ ಜಿ. ಎಸ್. ಭಟ್ ಅವರಿಗೆ ವಹಿಸಲಾಗಿದೆ. ಈ ಹಿಂದೆಯೂ ಅವರು ಹಲವು ವಿಶ್ವಕೋಶಗಳನ್ನು ಸಿದ್ಧಪಡಿಸುವಲ್ಲಿ ಕಾರ್ಯ ನಿರ್ವಹಿಸಿದ್ದು, ಅವರ ಮುಂದಾಳತ್ವದಲ್ಲಿ ಈ ವಿಶ್ವಕೋಶವೂ ಹೆಚ್ಚು ಫಲಪ್ರದವಾಗಿ ಬರಲಿದೆ ಎಂಬ ನಂಬಿಕೆಯನ್ನು ಅಕಾಡೆಮಿ ವ್ಯಕ್ತಪಡಿಸಿದೆ.
ಈ ಕಾರ್ಯಕ್ಕೆ ಸುಮಾರು 50 ಲಕ್ಷ ರೂ. ಗಳು ವೆಚ್ಚವಾಗುವ ಸಾಧ್ಯತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಅಕಾಡೆಮಿಯಲ್ಲಿ ಆರ್ಥಿಕ ಅನುದಾನದ ಕೊರತೆ ಇದ್ದರೂ, ಇದ್ದುದನ್ನೇ ಬಳಸಿಕೊಂಡು ಈ ವಿಶ್ವಕೋಶ ಸಿದ್ಧಪಡಿಸುವುದಾಗಿ ಅಕಾಡೆಮಿ ಮಾಹಿತಿ ನೀಡಿದೆ. ಯಕ್ಷಗಾನದ ಸಮಗ್ರ ಮಾಹಿತಿಯನ್ನು ಒಂದೇ ಕಡೆಯಲ್ಲಿ ನೀಡುವುದೇ ಇದರ ಉದ್ದೇಶವಾಗಿದೆ ಎಂದು ಅಕಾಡೆಮಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.