ನವದೆಹಲಿ: ವಂದೇ ಭಾರತ್ ಮಿಷನ್ ಅಡಿಯಲ್ಲಿ ಇದುವರೆಗೆ 15 ಲಕ್ಷಕ್ಕೂ ಹೆಚ್ಚು ಜನರು ಭಾರತಕ್ಕೆ ಮರಳಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಶನಿವಾರ ತಿಳಿಸಿದ್ದಾರೆ.
ವಿಮಾನಗಳ ಮೂಲಕ 4.5 ಲಕ್ಷಕ್ಕೂ ಹೆಚ್ಚು ಜನರು ಅಗಮಿಸಿದ್ದಾರೆ. ವಿವಿಧ ವಿಧಾನಗಳ ಮೂಲಕ ಉಳಿದ ಜನರು ಆಗಮಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
“ಮೇ 6, 2020 ರಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶದಲ್ಲಿ ಸಿಕ್ಕಿಬಿದ್ದ ನಾಗರಿಕರ ವಾಪಸಾತಿ ಮತ್ತು ಭಾರತದಲ್ಲಿ ಸಿಕ್ಕಿಬಿದ್ದ ವಿದೇಶಿ ನಾಗರಿಕರ್ ಹೊರಹೋಗುವ ಪ್ರಯಾಣವನ್ನು ಅಂತರರಾಷ್ಟ್ರೀಯ ವಿಮಾನಗಳು ಮುಂದುವರಿಸುತ್ತಿವೆ” ಎಂದು ಟ್ವಿಟ್ನಲ್ಲಿ ಪುರಿ ಹೇಳಿದ್ದಾರೆ. ಇದುವರೆಗೆ 15 ಲಕ್ಷಕ್ಕೂ ಹೆಚ್ಚು ಜನರು ವಿವಿಧ ವಿಧಾನಗಳ ಮೂಲಕ ಭಾರತಕ್ಕೆ ಮರಳಿದ್ದಾರೆ ಎಂದಿದ್ದಾರೆ.
ಇದಲ್ಲದೆ, ಸೆಪ್ಟೆಂಬರ್ 5 ರಂದು 4,059 ಭಾರತೀಯ ಪ್ರಜೆಗಳು ಮರಳಿದ್ದಾರೆ ಎಂದು ವಿಮಾನಯಾನ ಸಚಿವರು ಮಾಹಿತಿ ನೀಡಿದರು.
ಕೊರೋನಾವೈರಸ್ ನಿರ್ಬಂಧದಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ವಂದೇ ಭಾರತ್ ಮಿಷನ್ ಅನ್ನು ಮೇ ಆರಂಭದಲ್ಲಿ ಪ್ರಾರಂಭಿಸಲಾಯಿತು.
International flights continue to facilitate repatriation & outbound travel of stranded citizens under Vande Bharat Mission since 6 May 2020.
More than 15 lakh people have returned through various modes including more than 4.5 lakh on flights so far. pic.twitter.com/ChiWT140yz
— Hardeep Singh Puri (@HardeepSPuri) September 5, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.