ನವದೆಹಲಿ; ಐಟಿಬಿಪಿ ಮಹಾನಿರ್ದೇಶಕ ಎಸ್ಎಸ್ ದೇಸ್ವಾಲ್ ಅವರು ಶುಕ್ರವಾರ ಪೂರ್ವ ಲಡಾಖ್ನ ಐಟಿಬಿಪಿ ಬಾರ್ಡರ್ ಔಟ್ಪೋಸ್ಟ್ಗೆ ಭೇಟಿಯನ್ನು ನೀಡಿದ್ದು, ಅಲ್ಲಿ ನಿಯೋಜಿತರಾದ ಧೀರ ಯೋಧರನ್ನು ಭೇಟಿಯಾಗಿ ಅವರಿಗೆ ಅವಾರ್ಡ್ಗಳನ್ನು ಪ್ರದಾನಿಸಿದರು.
3 ಡಿಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಸೇರಿದಂತೆ ಒಟ್ಟು 291 ಐಟಿಬಿಪಿ ಯೋಧರನ್ನು ಗೌರವಿಸಲಾಯಿತು. ಕ್ಷೇತ್ರ ಕಮಾಂಡರ್ಗಳು ಮತ್ತು ಐಟಿಬಿಪಿ ಜವಾನರ ಪ್ರಯತ್ನವನ್ನು ದೇಸ್ವಾಲ್ ಈ ವೇಳೆ ಶ್ಲಾಘಿಸಿದರು.
ಸೈನಿಕ್ ಸಮ್ಮೇಳನ್ ಪ್ರಶಸ್ತಿಗಳನ್ನು ಆಯೋಜನೆ ಮಾಡಿತ್ತು, ಕಠಿಣ ಸವಾಲುಗಳು ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲೂ ದಿಟ್ಟವಾಗಿ ಕಾರ್ಯನಿರ್ವಹಿಸುವ ಯೋಧರ ಧೈರ್ಯವನ್ನು ಶ್ಲಾಘಿಸಲು ಇದನ್ನು ಆಯೋಜನೆಗೊಳಿಸಲಾಗಿದೆ. ಐಟಿಬಿಪಿಯ ಈ ಜವಾನರಿಗೆ 2020 ರ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ಅದನ್ನು ನಿನ್ನೆ ಪ್ರದಾನಿಸಲಾಯಿತು.
ಫಾರ್ವರ್ಡ್ ಸ್ಥಳಗಳಿಗೆ ಭೇಟಿಯ ಸಮಯದಲ್ಲಿ, ದೇಸ್ವಾಲ್ ಅವರು ಐಟಿಬಿಪಿ ಯೋಧರು ಮತ್ತು ಸೈನ್ಯದ ಫೀಲ್ಡ್ ಕಮಾಂಡರ್ಗಳೊಂದಿಗೆ ವಿವಿಧ ವಿಷಯಗಳ ಬಗ್ಗೆ ಸಂವಹನ ನಡೆಸಿದರು.
ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದರೂ, ಐಟಿಬಿಪಿ ಸೈನಿಕರು ಕಠಿಣ ಸಮಯದಲ್ಲಿ ಅತ್ಯಂತ ಪರಾಕ್ರಮ ಪ್ರದರ್ಶಿಸಿದರು ಮತ್ತು ಭಾರತೀಯ ಸೇನೆಯೊಂದಿಗೆ ಭುಜಕ್ಕೆ ಭುಜ ಕೊಟ್ಟು ನಿಂತರು ಎಂದು ಅವರು ಶ್ಲಾಘಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.