ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭಾ ಸೆಕ್ರೆಟರಿಯೇಟ್ ಎಲ್ಲಾ ಸಂಸದರು, ಅವರ ವೈಯಕ್ತಿಕ ಸಿಬ್ಬಂದಿ ಮತ್ತು ಸಂಸದೀಯ ನೌಕರರಿಗೆ ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸಂಸತ್ತಿಗೆ ಪ್ರವೇಶಿಸುವುದಕ್ಕೂ ಮುನ್ನ ಕಡ್ಡಾಯವಾಗಿ ಕೋವಿಡ್- 19 ಪರೀಕ್ಷಾ ವರದಿ ಸಲ್ಲಿಕೆ ಮಾಡಬೇಕು ಎಂದು ಸೂಚಿಸಿದೆ. ಸೆಪ್ಟೆಂಬರ್ 14 ರಿಂದ ಮಾನ್ಸೂನ್ ಅಧಿವೇಶನ ಆರಂಭವಾಗಲಿದ್ದು, ಇದಕ್ಕಾಗಿ ಸಂಸತ್ತು ಸಜ್ಜಾಗುತ್ತಿರುವುದರಿಂದ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಸೆಪ್ಟೆಂಬರ್ 11 ರ ನಂತರ ಸಂಸತ್ತಿಗೆ ಬರುವ 72 ಗಂಟೆಗಳ ಮೊದಲು ಸಂಸದರು ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಪರೀಕ್ಷೆಗಳನ್ನು ಮಾಡದಿದ್ದರೆ, ಸಂಸತ್ತಿನ ರಿಸೆಪ್ಶನಲ್ಲಿ ಮಾಡಲಾಗುತ್ತದೆ ಮತ್ತು ಫಲಿತಾಂಶಗಳು ಹೊರಬರುವವರೆಗೆ ಸದಸ್ಯರು ಕಾಯಬೇಕಾಗುತ್ತದೆ.
ಸದಸ್ಯರ ಕೊರೊನಾವೈರಸ್ ಪರೀಕ್ಷೆ ನೆಗೆಟಿವ್ ಬಂದರೆ ಮತ್ತು ಅವರಲ್ಲಿ ರೋಗಲಕ್ಷಣವನ್ನು ಕಂಡುಬಂದರೆ, ಆಗ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಫಲಿತಾಂಶಗಳು ಹೊರಬರುವವರೆಗೆ, ಮನೆಯಲ್ಲಿ ಐಸೋಲೇಷನ್ ಸೂಚಿಸಲಾಗುತ್ತದೆ.
ಅಧಿವೇಶನಕ್ಕೂ ಮುಂಚಿತವಾಗಿ ತಮ್ಮ ವೈಯಕ್ತಿಕ ಸಿಬ್ಬಂದಿ ಮತ್ತು ಕುಟುಂಬವನ್ನು ಪರೀಕ್ಷೆಗೆ ಒಳಪಡಿಸಲು ಸಂಸದರಿಗೆ ಸೂಚಿಸಲಾಗಿದೆ. ಈ ಉದ್ದೇಶಕ್ಕಾಗಿ ವಿವರವಾದ ಮಾರ್ಗಸೂಚಿಗಳನ್ನು ಸಂಸತ್ ಸದಸ್ಯರಿಗೆ ಕಳುಹಿಸಲಾಗಿದೆ. ಯಾವುದೇ ವೈಯಕ್ತಿಕ ಸಿಬ್ಬಂದಿ ಅಥವಾ ಕುಟುಂಬ ಸದಸ್ಯರು ಪಾಸಿಟಿವ್ ಬಂದರೆ, ಸಂಬಂಧಪಟ್ಟ ಸಂಸದರು ತಮ್ಮನ್ನು ಪ್ರತ್ಯೇಕಿಸಿ ಸರ್ಕಾರದ ಕಡ್ಡಾಯ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ.
ಲೋಕಸಭಾ ಸಚಿವಾಲಯವು ಶನಿವಾರ ಕೋವಿಡ್-19 ಪರೀಕ್ಷೆಗಳಿಗೆ ಶಿಬಿರವನ್ನು ಏರ್ಪಡಿಸಿದೆ, ಅಲ್ಲಿ ಅಧಿವೇಶನದ ಕರ್ತವ್ಯಕ್ಕೆ ಹಾಜರಾಗುವ ಎಲ್ಲಾ ನೌಕರರನ್ನು ಪರೀಕ್ಷಿಸಲಾಗುತ್ತದೆ. ಸಂಸತ್ತಿನ ಸ್ವಾಗತದ ಬಳಿ ಏಳು ಕೌಂಟರ್ಗಳನ್ನು ಸ್ಥಾಪಿಸಲಾಗಿದೆ.
ಅಧಿವೇಶನದಲ್ಲಿ ಸಂದರ್ಶಕರನ್ನು ಹೊರತುಪಡಿಸಿ ಯಾವುದೇ ರೋಗಲಕ್ಷಣದ ವ್ಯಕ್ತಿಯನ್ನು ಸದನಕ್ಕೆ ಅನುಮತಿಸಲಾಗುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.