ಹೈದರಾಬಾದ್: ಹೈದರಾಬಾದ್ನ ಪೊಲೀಸ್ ಅಕಾಡೆಮಿ ‘ದೀಕ್ಷಾಂತ್ ಪೆರೇಡ್ ಕಾರ್ಯಕ್ರಮ’ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಪ್ರೊಬೆಷನರ್ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದರು. ಈ ವೇಳೆ ಅವರು, ಉದ್ಯೋಗ ಮತ್ತು ಸಮವಸ್ತ್ರವನ್ನು ಗೌರವಿಸುವಂತೆ ಕಿವಿಮಾತು ಹೇಳಿದರು.
ಐಪಿಎಸ್ ಪ್ರೊಬೆಷನರ್ಗಳು ತಮ್ಮ ಸಮವಸ್ತ್ರವನ್ನು ಶಕ್ತಿಯ ಪ್ರದರ್ಶನಕ್ಕೆ ಬಳಸುವ ಬದಲು ಅದರ ಬಗ್ಗೆ ಹೆಮ್ಮೆಪಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ಪಿಎಂ ಮೋದಿ ಹೇಳಿದರು.
“ನಿಮ್ಮ ಖಾಕಿ ಸಮವಸ್ತ್ರದ ಬಗ್ಗೆ ಎಂದಿಗೂ ಗೌರವವನ್ನು ಕಳೆದುಕೊಳ್ಳಬೇಡಿ. ಈ ಕೋವಿಡ್-19 ಸಮಯದಲ್ಲಿ ಪೊಲೀಸರು ಮಾಡಿದ ಉತ್ತಮ ಕಾರ್ಯಗಳಿಂದಾಗಿ ಖಾಕಿ ಸಮವಸ್ತ್ರದ ಮಾನವೀಯ ಮುಖವನ್ನು ಸಾರ್ವಜನಿಕರ ಸ್ಮರಣೆಯಲ್ಲಿ ಅಚ್ಚೊತ್ತಿದೆ”ಎಂದು ಪ್ರಧಾನಿ ಹೇಳಿದರು.
ಐಪಿಎಸ್ ಪ್ರೊಬೆಷನರ್ಗಳಿಗೆ ಸಲಹೆಯನ್ನು ನೀಡಿದ ಪ್ರಧಾನಮಂತ್ರಿ, ” ಯೋಗ ಮತ್ತು ಪ್ರಾಣಾಯಮ ಒತ್ತಡದಲ್ಲಿ ಕೆಲಸ ಮಾಡುವ ಎಲ್ಲರಿಗೂ ಒಳ್ಳೆಯದು. ನಿಮ್ಮ ಹೃದಯದಿಂದ ನೀವು ಯಾವುದೇ ಕೆಲಸವನ್ನು ಮಾಡಿದರೆ, ನೀವು ಯಾವಾಗಲೂ ಪ್ರಯೋಜನ ಪಡೆಯುತ್ತೀರಿ. ಎಷ್ಟೇ ಕೆಲಸ ಇದ್ದರೂ ನೀವು ಎಂದಿಗೂ ಒತ್ತಡಕ್ಕೆ ಒಳಗಾಗುವುದಿಲ್ಲ” ಎಂದಿದ್ದಾರೆ.
ಅಧಿಕೃತ ಹೇಳಿಕೆಯ ಪ್ರಕಾರ, ಇಂದು 28 ಮಹಿಳೆಯರು ಸೇರಿದಂತೆ 131 ಐಪಿಎಸ್ ಪ್ರೊಬೆಷನರ್ಗಳು ಅಕಾಡೆಮಿಯಲ್ಲಿ ತಮ್ಮ 42 ವಾರಗಳ ಮೂಲ ಕೋರ್ಸ್ ಹಂತ -1 ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.