ನವದೆಹಲಿ: ಕೊರೋನಾವೈರಸ್ ಕಾರಣದಿಂದ ಭಾರತವು ದೊಡ್ಡ ಸವಾಲನ್ನು ಎದುರಿಸುತ್ತಿದೆ, ಆದರೆ ಜನರ ದೃಢತೆ ಮತ್ತು ಆಕಾಂಕ್ಷೆಗಳು ದೇಶವು ಸದೃಢವಾಗಿರುವುದನ್ನು ಖಚಿತಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಭಾರತ-ಯುಎಸ್ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಂನಲ್ಲಿ ಮುಖ್ಯ ಭಾಷಣ ಮಾಡಿದ ಪ್ರಧಾನಿ, ಸಾಂಕ್ರಾಮಿಕ ರೋಗದೊಂದಿಗಿನ ಯುದ್ಧದಲ್ಲಿ ದೇಶವು ಹೇಗೆ ಪ್ರಗತಿ ಸಾಧಿಸುತ್ತಿದೆ ಮತ್ತು ಇತರ ಕ್ಷೇತ್ರಗಳಲ್ಲಿ ಹೇಗೆ ಪ್ರಗತಿ ಸಾಧಿಸುತ್ತಿದೆ ಎಂಬ ಬಗ್ಗೆ ವಿವರವಾದ ವಿವರಣೆ ನೀಡಿದರು.
ಕಳೆದ ತಿಂಗಳುಗಳಲ್ಲಿ, ದೇಶವು ಕೋವಿಡ್ ಹೊರತುಪಡಿಸಿ ಪ್ರವಾಹ, ಎರಡು ಚಂಡಮಾರುತಗಳು ಮತ್ತು ಮಿಡತೆ ದಾಳಿಗಳನ್ನು ಎದುರಿಸಿದೆ. ಇದು ನಮ್ಮ ಜನರನ್ನು ಇನ್ನಷ್ಟು ಬಲಿಷ್ಠಗೊಳಿಸಿದೆ ಎಂದು ಪ್ರಧಾನಿ ಹೇಳಿದರು.
“ಇಂದು, ದೇಶದಲ್ಲಿ ತೀವ್ರ ನಿಗಾ ಘಟಕಗಳ ಸಾಮರ್ಥ್ಯ ಸಾಕಷ್ಟು ಇದೆ .ನಾವು ವಿಶ್ವದ ಎರಡನೇ ಅತಿದೊಡ್ಡ ಪಿಪಿಇ ಕಿಟ್ ತಯಾರಕರು. ಜನವರಿಯಲ್ಲಿ ಒಂದು ಕೊರೋನಾವೈರಸ್ ಪರೀಕ್ಷಾ ಪ್ರಯೋಗಾಲಯ ಹೊಂದಿದ್ದ ನಾವು ಈಗ ದೇಶಾದ್ಯಂತ 1,600 ಲ್ಯಾಬ್ಗಳನ್ನು ಹೊಂದಿದ್ದೇವೆ” ಎಂದಿದ್ದಾರೆ.
“ಭಾರತವು ಮಿಷನ್ ಆತ್ಮನಿರ್ಭರ ಮೋಡ್ನಲ್ಲಿದೆ. ಜಾಗತಿಕ ಪೂರೈಕೆ ಸರಪಳಿಯನ್ನು ಅಭಿವೃದ್ಧಿಗೊಳಿಸುವ ನಿರ್ಧಾರವು ಕೇವಲ ದರಗಳ ಮೇಲೆ ಆಧಾರಿತವಾಗಿ ಇರಬಾರದು ಎಂದು ಸಾಂಕ್ರಾಮಿಕ ರೋಗ ವಿಶ್ವಕ್ಕೆ ತೋರಿಸಿಕೊಟ್ಟಿದೆ. ಅದು ನಂಬಿಕೆ ಆಧಾರಿತವಾಗಿರಬೇಕು. ಭೌಗೋಳಿಕ ಅನುಕೂಲತೆ ಜೊತೆಗೆ, ಕಂಪನಿಗಳು ಪ್ರಸ್ತುತ ವಿಶ್ವಾಸಾರ್ಹತೆ ಮತ್ತು ನೀತಿ ಸ್ಥಿರತೆಯನ್ನು ನೋಡುತ್ತಿವೆ. 1.3 ಬಿಲಿಯನ್ ಭಾರತೀಯರು ಆತ್ಮನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತ ನಿರ್ಮಾಣದ ಸಂಕಲ್ಪ ಮಾಡಿದ್ದಾರೆ. ಆತ್ಮನಿರ್ಭರ ಭಾರತವು ಸ್ಥಳೀಯತೆಯನ್ನು ಜಾಗತಿಕದೊಂದಿಗೆ ವಿಲೀನಗೊಳಿಸುತ್ತದೆ. ಭಾರತದ ಶಕ್ತಿ ಜಾಗತಿಕ ಶಕ್ತಿಯಾಗಿ ರೂಪುಗೊಳ್ಳುವುದನ್ನು ಇದು ಖಚಿತಪಡಿಸುತ್ತದೆ. ತನ್ನ ಗುರಿ ಜಾಗತಿಕ ಸರಕು ಎಂಬುದನ್ನು ಭಾರತ ಮತ್ತೊಮ್ಮೆ ತೋರಿಸಿಕೊಟ್ಟಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.