ನವದೆಹಲಿ: ಭಾರತವು ಉತ್ತರ ಮತ್ತು ಪಶ್ಚಿಮ ರಂಗಗಳಲ್ಲಿ ಸಂಘಟಿತ ಬೆದರಿಕೆಯನ್ನು ಎದುರಿಸುತ್ತಿದೆ. ಆದರೆ ಇಂತಹ ಬೆದರಿಕೆಗಳಿಗೆ ಸಶಸ್ತ್ರ ಪಡೆಗಳು ಅತ್ಯುತ್ತಮವಾದ ರೀತಿಯಲ್ಲಿ ಪ್ರತಿಕ್ರಿಯಿಸುವ ಸಾಮರ್ಥ್ಯ ಹೊಂದಿವೆ ಎಂದು ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗುರುವಾರ ಹೇಳಿದ್ದಾರೆ.
ಪಾಕಿಸ್ಥಾನ ಮತ್ತು ಚೀನಾದ ಜಂಟಿ ಬೆದರಿಕೆಯನ್ನು ಪ್ರಸ್ತಾಪಿಸಿದ ಅವರು, ಪೂರ್ವ ಲಡಾಖ್ನ ಕೆಲವು ಪ್ರದೇಶಗಳಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಬೀಜಿಂಗ್ ಹೊಸ ಪ್ರಯತ್ನಗಳನ್ನು ನಡೆಸುತ್ತಿದ ಎಂದು ಆರೋಪಿಸಿದ್ದಾರೆ.
ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಂನಲ್ಲಿ ನಡೆದ ಸಂವಾದಾತ್ಮಕ ಅಧಿವೇಶನದಲ್ಲಿ ಮಾತನಾಡಿದ ಜನರಲ್ ರಾವತ್ ಅವರು, ವಿಶ್ವಾಸಾರ್ಹ ತೊಡಗಿಸಿಕೊಳ್ಳುವಿಕೆ ನೀತಿಯು ವಿಶ್ವಾಸಾರ್ಹ ಮಿಲಿಟರಿ ಶಕ್ತಿ ಮತ್ತು ಪ್ರಾದೇಶಿಕ ಪ್ರಭಾವದಿಂದ ಬೆಂಬಲಿತವಾಗಿರದಿದ್ದರ, ಈ ಪ್ರದೇಶದಲ್ಲಿ ಚೀನಾದ ಪ್ರಾಮುಖ್ಯತೆಯನ್ನು ಅಂಗೀಕರಿಸಬೇಕಾಗುತ್ತದೆ ಎಂದಿದ್ದಾರೆ.
“ಪಿಒಕೆ (ಪಾಕಿಸ್ಥಾನ ಆಕ್ರಮಿತ ಕಾಶ್ಮೀರ) ಗೆ ಚೀನಾದ ಆರ್ಥಿಕ ನೆರವು ಮತ್ತು ಪಾಕಿಸ್ಥಾನಕ್ಕೆ ಮಿಲಿಟರಿ ಮತ್ತು ರಾಜತಾಂತ್ರಿಕ ಬೆಂಬಲವನ್ನು ಮುಂದುವರಿಸುತ್ತಿರುವುದರಿಂದ ನಮ್ಮಿಂದ ಉನ್ನತ ಮಟ್ಟದ ಸಿದ್ಧತೆಗಳು ಅಗತ್ಯವಾಗಿ ನಡೆಯಬೇಕಾಗಿದೆ” ಎಂದು ಅವರು ಹೇಳಿದರು.
“ತಡವಾಗಿಯಾದರು, ಭಾರತವು ಚೀನಾದ ಕೆಲವು ಆಕ್ರಮಣಕಾರಿ ಕ್ರಮಗಳನ್ನು ನೋಡುತ್ತಿದೆ ಆದರೆ ಇವುಗಳನ್ನು ಉತ್ತಮ ಸೂಕ್ತ ರೀತಿಯಲ್ಲಿ ನಿರ್ವಹಿಸಲು ನಾವು ಸಮರ್ಥರಾಗಿದ್ದೇವೆ” ಎಂದು ಆನ್ಲೈನ್ ಸಮಾರಂಭದಲ್ಲಿ ಜನರಲ್ ರಾವತ್ ಹೇಳಿದ್ದಾರೆ.
ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ ಅವರು, ಚೀನಾದೊಂದಿಗಿನ ಗಡಿ ಸಂಘರ್ಷದ ಲಾಭವನ್ನು ಪಡೆದುಕೊಳ್ಳಲು ಭಾರತದ ವಿರುದ್ಧ ಯಾವುದೇ ದುಷ್ಕೃತ್ಯಕ್ಕೆ ಪ್ರಯತ್ನಿಸಿದರೆ ಆ ದೇಶವು ಭಾರಿ ನಷ್ಟ ಅನುಭವಿಸುತ್ತದೆ ಎಂದು ಎಚ್ಚರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.