ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಗುರುವಾರ ಲಡಾಖ್ಗೆ ತೆರಳಿದ್ದಾರೆ. ಸೇನಾ ಮೂಲಗಳ ಪ್ರಕಾರ, ಅವರು 1 ದಿನದ ಲಡಾಖ್ ಪ್ರವಾಸವನ್ನು ಕೈಗೊಂಡಿದ್ದು, ಈ ವೇಳೆ ಹಿರಿಯ ಕ್ಷೇತ್ರ ಕಮಾಂಡರ್ಗಳಿಂದ ಎಲ್ಎಸಿಯ ಉದ್ದಕ್ಕೂ ಇರುವ ಪರಿಸ್ಥಿತಿ ಕುರಿತು ವಿವರ ಪಡೆದುಕೊಳ್ಳಲಿದ್ದಾರೆ.
ಲಡಾಖ್ನ ಪಾಂಗೊಂಗ್ ಸರೋವರದ ದಕ್ಷಿಣ ಭಾಗವನ್ನು ಭಾರತೀಯ ಸೇನೆಯು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆ ಉತ್ತುಂಗಕ್ಕೇರಿರುವ ಸಮಯದಲ್ಲಿ ಜನರಲ್ ನಾರವಾಣೆ ಅವರ ಭೇಟಿ ನೀಡಿರುವುದು ಗಮನಾರ್ಹ.
ಭಾರತೀಯ ಸೈನ್ಯವು 1962 ರ ಯುದ್ಧದಲ್ಲಿ ಭಾರತದಿಂದ ಕಸಿದುಕೊಂಡಿದ್ದ ಹಲವಾರು ಪರ್ವತ ಶಿಖರಗಳನ್ನು ಒಂದೇ ಒಂದು ಗುಂಡು ಹಾರಿಸದೆ ಆಕ್ರಮಿಸಿಕೊಂಡಿದೆ.
ಆಗಸ್ಟ್ 29 ಮತ್ತು 30 ರ ರಾತ್ರಿ ಲಡಾಖ್ನ ಪಾಂಗೊಂಗ್ ಸರೋವರದ ತೀರದಲ್ಲಿ ಚೀನಾದ ಪಿಎಲ್ಎಯೊಂದಿಗೆ ಹೊಸ ಘರ್ಷಣೆ ನಡೆದ ನಂತರ ಭಾರತ ಸೇನೆಯು ಚೀನಾ ವಿರುದ್ಧ ಈ ಐತಿಹಾಸಿಕ ಯಶಸ್ಸನ್ನು ಸಾಧಿಸಿದೆ ಎಂದು ವರದಿಗಳು ತಿಳಿಸಿವೆ.
ಈ ಬೆಳವಣಿಗೆಯ ನಂತರ, ಚೀನಾ ಭಾರತದ ವಿರುದ್ಧ ಹೊಸ ಕಾಳಗವನ್ನು ನಡೆಸುವ ಸಾಧ್ಯತೆಯಿದೆ, ಆದರೆ ಭಾರತೀಯ ಸೇನೆಯು ಪಿಎಲ್ಎಯನ್ನು ಎದುರಿಸಲು ಎಲ್ಲಾ ಸ್ಥಳಗಳಲ್ಲಿ ಟ್ಯಾಂಕ್ಗಳನ್ನು ನಿಯೋಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.