ಚಂಢೀಘಡ: ದೇಶದಲ್ಲಿ ಕ್ರೀಡಾ ಸಾಧಕರಿಗೆ ನೀಡಲಾಗುವ ಅತ್ಯುನ್ನತ ಗೌರವ ‘ಖೇಲ್ ರತ್ನ’ಕ್ಕೆ ರಾಜೀವ್ ಗಾಂಧಿ ಅವರ ಹೆಸರಿನ ಬದಲು ಸಾಧಕ ಕ್ರೀಡಾಪಟುವಿನ ಹೆಸರಿಡಬೇಕು ಎಂದು ಖ್ಯಾತ ಕುಸ್ತಿಪಟು, ಬಿಜೆಪಿ ಸದಸ್ಯೆ, ಹರ್ಯಾಣ ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ಬಬಿತಾ ಪೊಗಟ್ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ( https://twitter.com/BabitaPhogat/status/1301052130518728704?s=19 )ಮಾಡಿರುವ ಅವರು, ಈ ರೀತಿಯ ಮನವಿಯನ್ನು ಮಾಡಿದ್ದಾರೆ. ಕ್ರೀಡಾ ಸಾಧಕರನ್ನು ಗೌರವಿಸುವ ಈ ಪ್ರಶಸ್ತಿಗೆ ಒಲಿಂಪಿಕ್, ಏಷ್ಯಾ ಅಥವಾ ಕಾಮನ್ವೆಲ್ತ್ ಕ್ರೀಡಾ ಕೂಟದಲ್ಲಿ ಹಲವು ಪದಕಗಳನ್ನು ಗೆದ್ದು ಸಾಧನೆ ಮಾಡಿರುವವರ ಹೆಸರನ್ನು ಇಡುವುದು ಹೆಚ್ಚು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ರೀಡಾ ಸಾಧಕರಿಗೆ ನೀಡಲಾಗುವ ಈ ಪ್ರಶಸ್ತಿ, ಸಾಧಕ ಕ್ರೀಡಾಪಟುವಿನ ಹೆಸರಿನಲ್ಲಿ ಸಿಕ್ಕಾಗಿ, ಆ ಪ್ರಶಸ್ತಿ ಪಡೆದ ವ್ಯಕ್ತಿಗೆ ಹೆಚ್ಚು ಸಂತೋಷ ಉಂಟಾಗುತ್ತದೆ. ಜೊತೆಗೆ ಆ ಪ್ರಶಸ್ತಿ ಪಡೆದಿರುವುದಕ್ಕೂ ಹೆಮ್ಮೆ ಪಡುತ್ತಾರೆ ಎಂದು ಪೊಗಟ್ ಅನಿಸಿಕೆಗಳನ್ನು ತಿಳಿಸಿದ್ದಾರೆ. ಬಬಿತಾ ಸಹೋದರಿ ವಿನೇಶಾ ಪೊಗಟ್ ಈ ಬಾರಿಯ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
खेलों से सम्बंधित पुरस्कार सिर्फ़ महान व सम्मानित खिलाड़ियों के नाम पर ही होना चाहिए ना कि किसी ‘राजनैतिक व्यक्ति’ के।
‘राजीव गांधी रत्नखेल ’ पुरस्कार का नाम बदलकर किसी खिलाड़ी के नाम पर किए जाने का सुझाव आपको कैसा लगा।
#खेलरत्न_खिलाड़ी_के_नाम_पर— Babita Phogat (@BabitaPhogat) September 2, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.