ನವದೆಹಲಿ: ಸಾಲಗಳ ಪುನರ್ ಸೃಷ್ಟಿಗೆ ಬ್ಯಾಂಕ್ಗಳು ಮುಕ್ತವಾಗಿವೆ. ಆದರೆ ಕೊರೋನಾ ಲಾಕ್ಡೌನ್ನಿಂದಾಗಿ ಮುಂದೂಡಲ್ಪಟ್ಟ ಇಎಂಐ ಪಾವತಿಗೆ ಬ್ಯಾಂಕ್ಗಳು ಪ್ರಾಮಾಣಿಕ ಸಾಲಗಾರರಿಗೆ ದಂಡ ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಕೊರೋನಾ ಸಂಕಷ್ಟದ ಅವಧಿಯಲ್ಲಿ ಮುಂದೂಡಲ್ಪಟ್ಟ ಇಎಂಐ ಪಾವತಿಗೆ ಬ್ಯಾಂಕ್ಗಳು ಬಡ್ಡಿ, ಚಕ್ರಬಡ್ಡಿ ವಿಧಿಸುವ ಮೂಲಕ ಪ್ರಾಮಾಣಿಕ ಸಾಲಗಾರರಿಗೆ ಸಮಸ್ಯೆ ಸೃಷ್ಟಿಸುತ್ತಿದೆ ಎಂಬುದರ ಬಗ್ಗೆ ವ್ಯಕ್ತಿಯೋರ್ವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ಪ್ರಾಮಾಣಿಕ ಸಾಲಗಾರರಿಗೆ ಸಂಕಷ್ಟ ಸೃಷ್ಟಿಸದಂತೆ ಸೂಚಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ದತ್ತಾ, ಲಾಕ್ಡೌನ್ ಸಮಯದಲ್ಲಿ ಬ್ಯಾಂಕ್ಗಳಿಗೆ ನಾನಾ ಪರಿಹಾರ ನೀಡಲಾಗಿದೆ. ಆದರೂ ಬಡ್ಡಿಗೆ ಬಡ್ಡಿ ವಿಧಿಸುವ ಮೂಲಕ ಪ್ರಾಮಾಣಿಕ ಸಾಲದ ಬಡ್ಡಿ ಪಾವತಿಸುವ ಸಾಲಗಾರರಿಗೂ ಸಂಕಷ್ಟ ನಿರ್ಮಾಣ ಮಾಡಲಾಗುತ್ತಿದೆ. ಕೊರೋನಾ ಅವಧಿಯಲ್ಲಿಯೂ ಬ್ಯಾಂಕ್ಗಳು ದಂಡ ವಿಧಿಸುವ ಕ್ರಮ ಸರಿಯಲ್ಲ ಎಂದು ವಾದ ಮಂಡಿಸಿದ್ದರು.
ಕಾನ್ಫಿಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಕ್ರೆಡೈ) ಪರವಾಗಿ ಹಾಜರಾದ ಹಿರಿಯ ವಕೀಲ ಸಿ ಎ ಸುಂದರಂ ಅವರು ನ್ಯಾಯಪೀಠಕ್ಕೆ ಮೊರಟೋರಿಯಂ ಅನ್ನು ಕನಿಷ್ಠ ಆರು ತಿಂಗಳವರೆಗೆ ವಿಸ್ತರಿಸಬೇಕು ಎಂದು ತಿಳಿಸಿದರು. ಬಡ್ಡಿ ಮನ್ನಾ ಅಸಾಧ್ಯವಾದರೆ ಅದನ್ನು ಠೇವಣಿದಾರರಿಗೆ ಪಾವತಿಸಲು ಸಾಧ್ಯವಾಗುವ ದರಕ್ಕೆ ಇಳಿಸಬೇಕು ಎಂದು ಆರ್ಬಿಐ ಆಗಸ್ಟ್ 6 ರಂದು ಹೊರಡಿಸಿದ್ದ ಸುತ್ತೋಲೆಯನ್ನು ಉಲ್ಲೇಖಿಸಿ ವಾದ ಮಂಡಿಸಿದರು.
ಈ ಸಂಬಂಧ ಕೊರೋನಾ ಸಾಂಕ್ರಾಮಿಕ ಅವಧಿಯಲ್ಲಿ ಸಾಲ ಮರುಪಾವತಿಸುವವರ ಮೇಲಿನ ನಿಷೇಧವನ್ನು ಎರಡು ವರ್ಷಗಳಿಗೆ ವಿಸ್ತರಿಸಿರುವುದಾಗಿ ಮತ್ತು ಆರ್ಥಿಕ ಒತ್ತಡಕ್ಕೊಳಗಾದ ಕ್ಷೇತ್ರಗಳಿಗೆ ಸಹಕಾರಿಯಾಗುವಂತೆ ಕ್ರಮ ಕೈಗೊಳ್ಳಲಾಗಿರುವುದಾಗಿ ಕೇಂದ್ರ ಮತ್ತು ಆರ್ಬಿಐ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.