ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರೋತ್ಸವದ ಭಾಷಣದ ಸಂದರ್ಭದಲ್ಲಿ ಸ್ಯಾನಿಟರಿ ಪ್ಯಾಡ್ಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇದರಿಂದ ಸ್ಫೂರ್ತಿ ಪಡೆದುಕೊಂಡಿರುವ ಬಿಜೆಪಿ ಸಂಸದರೊಬ್ಬರು ಎರಡು ಹಳ್ಳಿಗಳನ್ನು ದತ್ತು ಪಡೆದುಕೊಂಡು ಅಲ್ಲಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ಪೂರೈಕೆ ಮಾಡುತ್ತಿದ್ದಾರೆ.
ಸಂಸದ ರಾಕೇಶ್ ಸಿನ್ಹಾ ಅವರು ಬಿಹಾರ ಮತ್ತು ಮೇಘಾಲಯ ರಾಜ್ಯಗಳಲ್ಲಿ ತಲಾ ಒಂದು ಹಳ್ಳಿಗಳನ್ನು ದತ್ತು ಪಡೆದು ಕೊಂಡಿದ್ದಾರೆ. ಅಲ್ಲಿಗೆ ಸ್ಯಾನಿಟರಿ ಪ್ಯಾಡ್ ಮಾತ್ರವಲ್ಲದೆ, ಸೋಪ್ ಅನ್ನು ಕೂಡ ಕಳುಹಿಸಿಕೊಡುತ್ತಿದ್ದಾರೆ.
ಈ ಬಗ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದು, “ನಿಮ್ಮ ಮಾತುಗಳಿಂದ ಸ್ಪೂರ್ತಿಯನ್ನು ಪಡೆದುಕೊಂಡು ನಾನು ಮೇಘಾಲಯದ ಕೊಂಗ್ತಾಂಗ್ ಮತ್ತು ಬಿಹಾರದ ಬೆಗಸುರಾಯ್ ಸಮೀಪದ ಬೈರಾಪುರ ಹಳ್ಳಿಗಳನ್ನು ದತ್ತು ಪಡೆದುಕೊಂಡು, ಅಲ್ಲಿಗೆ ಸ್ಯಾನಿಟರಿ ಪ್ಯಾಡ್ ಮತ್ತು ಸಾಬೂನುಗಳನ್ನು ಪೂರೈಕೆ ಮಾಡುತ್ತಿದ್ದೇನೆ. ಈ ಗ್ರಾಮಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿವೆ” ಎಂದಿದ್ದಾರೆ.
ಕೊಂಗ್ತಾಂಗ್ನಲ್ಲಿ 97 ಕುಟುಂಬಗಳಿಗೆ 3000 ಸೋಪು ಮತ್ತು 3600 ಸ್ಯಾನಿಟರಿ ಪ್ಯಾಡ್ಗಳನ್ನು ಇವರು ಕಳುಹಿಸಿದ್ದಾರೆ. ಬೈರಾಪುರದ 300 ಕುಟುಂಬಗಳಿಗೆ ಸುಮಾರು 2000 ಸಾಬೂನು ಮತ್ತು 4000 ಸ್ಯಾನಿಟರಿ ಪ್ಯಾಡ್ ಗಳನ್ನು ಇವರು ಕಳುಹಿಸಿಕೊಟ್ಟಿದ್ದಾರೆ.
ಇವರ ಕಾರ್ಯಕ್ಕೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
My letter to Prime Minister Sh @narendramodi ji for his genuine conviction for women empowerment.Sent 6000+sanitary napkins &soaps to the villages adopted by me,Kongthong (Meghalaya)&Braipura in Begusarai (Bihar).In both villages women are largely unaware of its use. @PMOIndia pic.twitter.com/khokwFsnpL
— Prof Rakesh Sinha (@RakeshSinha01) September 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.