ಬೆಂಗಳೂರು: ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಪ್ರತಿಷ್ಠಾನ ಮತ್ತು ಪರ್ಯಾವರಣ ಸಂರಕ್ಷಣೆ ಗತಿವಿಧಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಪರ್ಯಾವರಣ ಮತ್ತು ವನ ಸಂರಕ್ಷಣೆಗಾಗಿ ಆಗಸ್ಟ್ 30 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಕೃತಿ ವಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಆಸಕ್ತಕರಿಗೆ ಮನೆಯಲ್ಲೇ ಕುಳಿತು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶವಿದೆ. ಈ ಕೆಳಗಿನ ಗೂಗಲ್ ಲಿಂಕ್ ನಲ್ಲಿ ಕಾರ್ಯಕ್ರಮಕ್ಕೆ ನೋಂದಾಯಿಸಿದರೆ, ಫೇಸ್ ಬುಕ್ ಲೈವ್ ಲಿಂಕನ್ನು ಕಳಿಸಲಾಗುವುದು.
https://forms.gle/63tLAs5E7wtw7NnVA
ಕಾರ್ಯಕ್ರಮದ ಉದ್ದೇಶಗಳು:
1. ಗಿಡ, ಮರ, ಜಲ, ಭೂಮಿಯ ಸಂರಕ್ಷಣೆಗಾಗಿ ಶೃದ್ಧೆ ಮತ್ತು ಸಮ್ಮಾನದ ಸಂವರ್ಧನೆಯ ಪ್ರತೀಕವಾಗಿ ಈ ಕಾರ್ಯಕ್ರಮ.
2. ಪರಿಸರ ಮತ್ತು ಪ್ರಾಣಿಗಳ ರಕ್ಷಣೆಯ ಬಗ್ಗೆ ನಮ್ಮ ಪ್ರಾಚೀನ ಮೌಲ್ಯಗಳನ್ನು ಪುನಃ ನಮ್ಮ ಸಮಾಜಕ್ಕೆ ನೆನಪಿಸಿ ಮತ್ತೆ ಆ ದಿಶೆಯಲ್ಲಿ ಚಿಂತನೆ ಮಾಡುವುದು ಈ ಕಾರ್ಯಕ್ರಮದ ಉದ್ದೆಶ.
3. ನಮ್ಮ ಮನೆಯಲ್ಲಿರುವ ಗಿಡದ ಕುಂಡವನ್ನೆ ಪರಿಸರ ಮತ್ತು ವನಗಳ ಬಗ್ಗೆ ನಮಗಿರುವ ಶೃದ್ದೆಯ ಸಂಸ್ಕಾರದ ಪ್ರತೀಕವನ್ನಾಗಿ ಮಾಡಿಕೊಳ್ಳಬಹುದು.
4. ಪ್ರತೀಕ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದ ಪ್ರಭಾವ ಬೀರುತ್ತದೆ, ಅದರ ಜೊತೆಗೆ ಅದು ನಮ್ಮ ವಿಚಾರ ಮತ್ತು ಆಚರಣೆಯ ಮೇಲೆಯೂ ಪ್ರಭಾವ ಬೀರುತ್ತದೆ. ಹಾಗಾಗಿಯೆ ಪ್ರಕೃತಿ ವಂದನೆಗಾಗಿ ಗಿಡ ಮರ ಭೂಮಿಯನ್ನು ಪ್ರತೀಕವಾಗಿ ಆರಿಸಿದೆ.
5. ಮನುಷ್ಯ ತನ್ನ ದಿನನಿತ್ಯದ ಜೀವನದಲ್ಲಿ ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶದ ರಕ್ಷಣೆ ಈ ವಂದನಾ ಕಾರ್ಯದ ಉದ್ದೇಶವಾಗಿದೆ.
6. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರ ಜೊತೆಗೆ ಯಾವುದಾದರೂ ವೃಕ್ಷ ಅಥವಾ ಕುಂಡದಲ್ಲಿರುವ ಗಿಡಕ್ಕೆ ವಂದನೆ ಮಾಡಬೇಕು.
7.ಪೂಜಾ ಸಾಮಗ್ರಿ – ನೀರು ತುಂಬಿದ ಲೋಟ, ಅರಿಷಿನ, ಪವಿತ್ರ ದಾರ, ಪುಷ್ಪ , ದೀಪ, ಅಕ್ಷತೆ ಮತ್ತು ಪ್ರಸಾದ.
8. ವಂದನೆಯ / ಪೂಜೆಯ ಕ್ರಮ
ಓಂಕಾರ ಮೂರು ಬಾರಿ
ವೃಕ್ಷಕ್ಕೆ ತಿಲಕ ಮತ್ತು ಅಕ್ಷತೆ
ಸಂರಕ್ಷಣೆಯ ದ್ಯೋತಕವಾಗಿ ಪವಿತ್ರ ದಾರ ಕಟ್ಟುವುದು
ಜಲ ಪ್ರದಾನ ಮತ್ತು ಪ್ರತಿ ದಿನ ನೀರುಣಿಸುವ ಸಂಕಲ್ಪ
ಪುಷ್ಪಾರ್ಚನೆ
ಪ್ರಸಾದವನ್ನು ನೈವೇದ್ಯ ಮಾಡುವುದು
ದೀಪವನ್ನು ಹಚ್ಚಿ ಆರತಿಯನ್ನು ಮಾಡಬೇಕು
ವೃಕ್ಷಕ್ಕೆ ಪ್ರದಕ್ಷಿಣೆ – 3 ಬಾರಿ
ಪ್ರಸಾದ ವಿತರಣೆ
ಪ್ರಕೃತಿ ವಂದನಾ ಕಾರ್ಯಕ್ರಮಕ್ಕೆ ಗೂಗಲ್ ಲಿಂಕ್ ನಲ್ಲಿ ನೋಂದಾಯಿಸಿ ಮತ್ತು ನಿಮ್ಮ 10 ಗೆಳೆಯರ ಕುಟುಂಬಗಳನ್ನು ನೋಂದಾಯಿಸಲು ಕೈ ಜೋಡಿಸಿ
ಗಣಪತಿ ಹೆಗಡೆ 94489 87819
ವೆಂಕಟೇಶ್ ಸಂಗನಾಳ 908935599
ರಮೇಶ +91 99008 25130
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.