ತಿರುವನಂತಪುರ: ಕೇರಳದ ಪ್ರಸಿದ್ಧ ಅಯ್ಯಪ್ಪ ದೇವಾಲಯ ಶಬರಿಮಲೆ ಸನ್ನಿಧಾನವನ್ನು ಭಾನುವಾರ ತೆರೆಯಲಾಗಿದ್ದು, ಮಲಯಾಳದ ಚಿಂಗಮ್ ಮಾಸದ 5 ದಿನಗಹ ವಿಶೇಷ ಪೂಜೆಯನ್ನು ನಡೆಸಲು ಬೇಕಾದ ಸಕಲ ಸಿದ್ಧತೆಗಳನ್ನೂ ದೇವಾಲಯದ ಆಡಳಿತ ಮಂಡಳಿ, ಅರ್ಚಕರು ಮಾಡಿಕೊಳ್ಳುತ್ತಿದ್ದಾರೆ.
ವರ್ಷಂಪ್ರತಿ ಈ ತಿಂಗಳಿನಲ್ಲಿ, ಪೂಜೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಅಯ್ಯಪ್ಪನ ದರ್ಶನ ಪಡೆಯಲು ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ಭಕ್ತರಿಗೆ ಈ ಸಂದರ್ಭ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಮಾಸಿಕ ಪೂಜೆಯ ಬಳಿಕ ಆಗಸ್ಟ್ 21 ರಂದು ದೇವಾಲಯವನ್ನು ಮತ್ತೆ ಮುಚ್ಚಲಾಗುತ್ತದೆ ಎಂದೂ ದೇವಾಲಯದ ಆಡಳಿತ ವರ್ಗ ಮಾಹಿತಿ ನೀಡಿದೆ.
ಇನ್ನು ಶಬರಿ ಮಲೆಯ ವಾರ್ಷಿಕ ಯಾತ್ರೆ ನವೆಂಬರ್ 16 ರಿಂದ ತೊಡಗಿದಂತೆ ಆರಂಭವಾಗಲಿದೆ. ಈ ಬಾರಿಯ ಕೊರೋನಾ ಸಂಕಷ್ಟದ ನಡುವೆಯೂ ಅದೆಷ್ಟೋ ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯ, ಆಚಾರ, ವಿಚಾರಗಳನ್ನು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ನಡೆಸುವ ಬಗ್ಗೆಯೂ ದೇಗುಲ ಮತ್ತು ಸರ್ಕಾರ ಚಿಂತನೆ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.