ನವದೆಹಲಿ: ದೇಶದ ಸ್ವಾತಂತ್ರ್ಯ ದಿನದ ಈ ಸುಸಂದರ್ಭದಲ್ಲಿ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವ 84 ರಕ್ಷಣಾ ಸಿಬ್ಬಂದಿಗಳಿಗೆ ಶೌರ್ಯ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅನುಮೋದಿಸಿದ್ದಾರೆ. ಮರಣೋತ್ತರವಾಗಿ ಜಮ್ಮು ಕಾಶ್ಮೀರದ ಪೋಲಿಸ್ ಹೆಡ್ಕಾನ್ಸ್ಟೇಬಲ್ ರಶೀದ್ ಕಲಾಸ್ ಅವರಿಗೆ ಕೀರ್ತಿ ಚಕ್ರವನ್ನು ನೀಡಿ ಗೌರವ ಸಲ್ಲಿಸಲಾಗಿದೆ. ಕರ್ನಾಟಕದ 19 ಮಂದಿ ಪೊಲೀಸರೂ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಗಾಗಿ ಲೆ.ಕರ್ನಲ್ ಕ್ರಿಶನ್ ಸಿಂಗ್ ರಾವತ್, ಮೇ. ಅನಿಲ್ ಉರ್ಸ್, ಹವಾಲ್ದಾರ್ ಅಲೋಕ್ ಕುಮಾರ್ ದುಬೆ, ವಾಯುಸೇನೆಯ ವಿಂಗ್ ಕಮಾಂಡರ್ ವಿಶಾಕ್ ನಾಯರ್ ಅವರಿಗೆ ಶೌರ್ಯ ಚಕ್ರ ನೀಡಿ ಗೌರವಿಸಲಾಗಿದೆ. 60 ಸೇನಾ ಸಿಬ್ಬಂದಿಗಳಿಗೆ ಸೇನಾ ಪದಕ(ಶೌರ್ಯ), 4 ನೌಕಾ ಸೇನಾ ಸಿಬ್ಬಂದಿಗಳಿಗೆ ನೌಕಾ ಸೇನಾ ಪದಕ (ಶೌರ್ಯ), ಐವರು ವಾಯುಪಡೆಯ ಸಿಬ್ಬಂದಿಗಳಿಗೆ ವಾಯುಸೇನಾ ಪದಕ(ಶೌರ್ಯ) ಗಳನ್ನು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ಜೊತೆಗೆ ಐವರು ಸೇನಾ ಸಿಬ್ಬಂದಿಗಳಿಗೆ ಬಾರ್ 2 ಸೇನಾ ಪದಕವನ್ನೂ ಅನುಮೋದಿಸಲಾಗಿದೆ.
ಹಲವಾರು ಸೇನಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಸೇನಾ ಸಿಬ್ಬಂದಿಗಳ ಸಾಹಸಕ್ಕಾಗಿ 19 ಜನರಿಗೆ ಮೆನ್-ಇನ್-ಡೆಸ್ಪ್ಯಾಚ್ಗಳನ್ನು ಅನುಮೋದಿಸಲಾಗಿದೆ. ಇದರಲ್ಲಿ ಎಂಟು ಜನರಿಗೆ ಮರಣೋತ್ತರವಾಗಿ ಪದಕ ಲಭಿಸಿದೆ. ಆಪರೇಷನ್ ಮೇಘದೂತ್ ಮತ್ತು ಆಪರೇಷನ್ ರಕ್ಷಕ್ಗಾಗಿ ಈ ಪದಕಗಳನ್ನು ಮರಣೋತ್ತರವಾಗಿ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.