ನವದೆಹಲಿ: ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ತನ್ನ 21 ಸಿಬ್ಬಂದಿಗಳ ಹೆಸರನ್ನು ಶೌರ್ಯ ಪದಕಗಳಿಗೆ ಶಿಫಾರಸ್ಸು ಮಾಡಲಾಗಿದೆ. ಈ ಸಿಬ್ಬಂದಿಗಳು 2020 ರ ಮೇ-ಜೂನ್ನಲ್ಲಿ ಲಡಾಖ್ನಲ್ಲಿ ನಡೆದ ಚಕಮಕಿಯಲ್ಲಿ ಚೀನಾದ ಸೈನ್ಯವನ್ನು ಎದುರಿಸಿದವರು ಎಂದು ವರದಿಗಳು ತಿಳಿಸಿವೆ.
ಅಲ್ಲದೇ 294 ಸಿಬ್ಬಂದಿಗೆ ಡೈರೆಕ್ಟರ್ ಜನರಲ್ ಪ್ರಶಂಸೆ ಪ್ರಶಸ್ತಿಯನ್ನು ನೀಡಲಾಗಿದೆ.
ಐಟಿಬಿಪಿ ಪಡೆಗಳು ಚೀನಾ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳಲು ಗುರಾಣಿ (shield )ಗಳನ್ನು ಪರಿಣಾಮಕಾರಿಯಾಗಿ ಬಳಸಿರುವುದಲ್ಲದೇ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಯ ಸೈನಿಕರಿಗೆ ತೀವ್ರವಾಗಿ ಪ್ರತಿಕ್ರಿಯೆನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿವೆ. ವೃತ್ತಿಪರ ಕೌಶಲ್ಯದ ಉನ್ನತ ಕ್ರಮದೊಂದಿಗೆ, ಐಟಿಬಿಪಿ ಪಡೆಗಳು ಹೆಗಲಿಗೆ ಹೆಗಲು ಕೊಟ್ಟು ಹೋರಾಡಿವೆ ಮತ್ತು ಗಾಯಗೊಂಡ ಭಾರತೀಯ ಸೇನಾ ಸಿಬ್ಬಂದಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಹೊತ್ತು ತಂದಿವೆ.
ಐಟಿಬಿಪಿ ಪಡೆಗಳು ಇಡೀ ರಾತ್ರಿ ಚೀನಾದ ಸೈನಿಕರ ವಿರುದ್ಧ ಹೋರಾಡಿದ್ದಾರೆ, ಮಾತ್ರವಲ್ಲ ಚೀನಿ ಕಲ್ಲು ತೂರಾಟಗಾರರಿಗೆ ಸೂಕ್ತವಾದ ಉತ್ತರವನ್ನು ನೀಡಿದ್ದಾರೆ. ಈ ವೇಳೆ ಐಟಿಬಿಪಿ ಸಿಬ್ಬಂದಿಗೆ ಕನಿಷ್ಠ ಸಾವುನೋವುಗಳು ಅಗಿದ್ದು, ಚೀನಿಯರು ಹೆಚ್ಚು ನೋವು ಅನುಭವಿಸಿದ್ದಾರೆ. ಕೆಲವು ಸ್ಥಳಗಳಲ್ಲಿ ಈ ಪಡೆಯ ಯೋಧರು ರಾತ್ರಿಯಿಡೀ ಸುಮಾರು 17 ರಿಂದ 20 ಗಂಟೆಗಳ ಕಾಲ ನಿರ್ಣಾಯಕ ರೀತಿಯಲ್ಲಿ ಚೀನಿಯರ ವಿರುದ್ಧ ಹೋರಾಡಿದ್ದಾರೆ.
ಹಿಮಾಲಯದಲ್ಲಿ ಹೆಚ್ಚಿನ ಎತ್ತರದಲ್ಲಿ ಪರಾಕ್ರಮ ಮೆರೆಯುವ ತರಬೇತಿ ಮತ್ತು ಕುಶಲತೆಯ ಅನುಭವದಿಂದಾಗಿ, ಐಟಿಬಿಪಿ ಪಡೆಗಳು ಪಿಎಲ್ಎ ಸೈನ್ಯವನ್ನು ದಿಟ್ಟವಾಗಿ ಹಿಮ್ಮೆಟ್ಟಿಸಿವೆ ಮತ್ತು ಐಟಿಬಿಪಿ ಯೋಧರ ಪರಾಕ್ರಮದ ಫಲವಾಗಿ ಇಂದಿಗೂ ಚೀನಾದೊಂದಿಗಿನ ಭಾರತದ ಗಡಿ ಸುರಕ್ಷಿತವಾಗಿದೆ.
ಐಟಿಬಿಪಿ ಮಹಾನಿರ್ದೇಶಕ ಎಸ್.ಎಸ್.ದೇಸ್ವಾಲ್ ಅವರು ಯೋಧರ ಹೆಸರುಗಳನ್ನು ಶೌರ್ಯ ಪದಕಗಳಿಗೆ ಶಿಫಾರಸ್ಸು ಮಾಡಿದ್ದಾರೆ.
ವುಹಾನ್ ಮತ್ತು ಇಟಲಿಯಿಂದ ಸ್ಥಳಾಂತರವಾದವರಿಗೆ ಚಾವ್ಲಾ ಕ್ಯಾಂಪ್ನಲ್ಲಿ ಅತಿದೊಡ್ಡ ಕ್ಯಾರೆಂಟೈನ್ ಸೌಲಭ್ಯವನ್ನು ಸ್ಥಾಪಿಸಿದ ಐಟಿಬಿಪಿ 2020 ರ ಜನವರಿಯಿಂದ ಕೋವಿಡ್ -19 ಯುದ್ಧದಲ್ಲಿ ಮುಂಚೂಣಿಯಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.