ಬೆಂಗಳೂರು: ಚಿತ್ರದುರ್ಗದ ಚಳ್ಳಕೆರೆಯ ಐಐಎಸ್ ಸಿ ಕ್ಯಾಂಪಸ್ ನಲ್ಲಿ ನಿರ್ಮಾಣವಾಗಿರುವ HAL-IISC ಸಹಯೋಗದ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆನ್ ಲೈನ್ ಮೂಲಕ ಉದ್ಘಾಟಿಸಿದರು. 73.7 ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರ ನಿರ್ಮಾಣವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಜ್ಞಾನವು ಶಕ್ತಿಯಾಗಿದೆ ಮತ್ತು ನುರಿತ ಕಾರ್ಯಪಡೆಯು ನಾವೀನ್ಯತೆ ಮತ್ತು ಸೃಜನಶೀಲತೆಗೆ ಒಂದು ಮೂಲಭೂತ ಅವಶ್ಯಕತೆಯಾಗಿದೆ, ಕೌಶಲ್ಯಾಭಿವೃದ್ಧಿ ಕೇಂದ್ರ ದೇಶದ ಪ್ರಮುಖ ಏರೋಸ್ಪೇಸ್ ದೈತ್ಯ ಎಚ್ಎಎಲ್ ಮತ್ತುಉನ್ನತ ಶೈಕ್ಷಣಿಕ ಸಂಸ್ಥೆ ಐಐಎಸ್ಸಿಯ ಅತ್ಯುತ್ತಮವಾದ ಸಹಯೋಗದ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್, ರಕ್ಷಣಾ ಕಾರ್ಯದರ್ಶಿ ರಾಜ್ ಕುಮಾರ್, ಕಾರ್ಯದರ್ಶಿ (ರಕ್ಷಣಾ ಉತ್ಪಾದನೆ), ಆರ್.ಮಾಧವನ್, ಎಚ್ಎಎಲ್ನ ಸಿಎಂಡಿ ಅಲೋಕ್ ವರ್ಮ, ಐಐಎಸ್ಸಿ ನಿರ್ದೇಶಕ ಪ್ರೋ.ರಂಗರಾಜನ್ ಮುಂತಾದವರು ಉಪಸ್ಥಿತರಿದ್ದರು.
ಈ ಕೇಂದ್ರವು ಸ್ಥಳೀಯ ಸಮುದಾಯದ ಸದಸ್ಯರಿಂದ ಹಿಡಿದು ಉನ್ನತ ಮಟ್ಟದ ಎಂಜಿನಿಯರಿಂಗ್ ವೃತ್ತಿಪರರವರೆಗಿನ ವಿವಿಧ ಫಲಾನುಭವಿಗಳಿಗೆ ನಿಜವಾದ ‘ಮೇಕ್-ಇನ್-ಇಂಡಿಯಾ’ ಕೌಶಲ್ಯವನ್ನು ನೀಡುತ್ತದೆ ಎಂದು ಮಾಧವನ್ ಹೇಳಿದರು.
“ಈ ನಿರ್ಣಾಯಕ ರಾಷ್ಟ್ರೀಯ ಉಪಕ್ರಮದಲ್ಲಿ ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ನಮ್ಮೊಂದಿಗೆ ಸಹಭಾಗಿತ್ವ ವಹಿಸಿದ್ದಕ್ಕಾಗಿ ನಾವು ಎಚ್ಎಎಲ್ಗೆ ಕೃತಜ್ಞರಾಗಿರುತ್ತೇವೆ” ಎಂದು ಪ್ರೊಫೆಸರ್ ರಂಗರಾಜನ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.