ನವದೆಹಲಿ: ಭಾರತೀಯ ಹೆದ್ದಾರಿಗಳು ಮತ್ತು ಎಂಎಸ್ಎಂಇ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಮಂಡಳಿಗಳು ಹೂಡಿಕೆಯನ್ನು ಹೆಚ್ಚಿಸಬೇಕೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕರೆ ನೀಡಿದ್ದಾರೆ. ಆಟೋಮೊಬೈಲ್ ಮತ್ತು ಎಂಎಸ್ಎಂಇ ಭಾರತೀಯ ಆರ್ಥಿಕತೆಯ ಎರಡು ಬೆಳವಣಿಗೆ ಎಂಜಿನ್ಗಳಾಗಿವೆ ಎಂದು ಅವರು ಹೇಳಿದರು.
ರಸ್ತೆ ಮೂಲಸೌಕರ್ಯ ಮತ್ತು ಎಂಎಸ್ಎಂಇಗಳಲ್ಲಿನ ಸಹಯೋಗ ಕುರಿತು ಇಂಡೋ-ಆಸ್ಟ್ರೇಲಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಮಹಿಳಾ ಹೂಡಿಕೆದಾರರನ್ನು ಉದ್ದೇಶಿಸಿ ಮಾತಾನಾಡಿದ ಸಚಿವರು, ಭಾರತ ಮತ್ತು ಆಸ್ಟ್ರೇಲಿಯಾ ಈಗಾಗಲೇ ರಸ್ತೆ ಸುರಕ್ಷತಾ ಕ್ಷೇತ್ರದಲ್ಲಿ ಸಹಕಾರ ನೀಡುತ್ತಿವೆ. ಈ ಸಹಕಾರವು ರಸ್ತೆಗಳಿಗೆ ಉತ್ತಮ ವಿನ್ಯಾಸ ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅವಕಾಶಗಳನ್ನು ಒದಗಿಸಿದೆ ಎಂದರು.
ಭಾರತೀಯ ರಸ್ತೆ ಸುರಕ್ಷತಾ ಮೌಲ್ಯಮಾಪನ ಕಾರ್ಯಕ್ರಮದಡಿ, 21 ಸಾವಿರ ಕಿ.ಮೀ ರಸ್ತೆಗಳನ್ನು ಮೌಲ್ಯಮಾಪನ ಮಾಡಲಾಗಿದೆ ಮತ್ತು ಸುಮಾರು 3000 ಕಿ.ಮೀ ರಸ್ತೆ ತಾಂತ್ರಿಕ ಸುಧಾರಣೆಯಲ್ಲಿದೆ. ಉತ್ತಮ ರಸ್ತೆ ಎಂಜಿನಿಯರಿಂಗ್ ಮತ್ತು ಸಾರ್ವಜನಿಕ ಜಾಗೃತಿಗಳಲ್ಲಿ ಹೆಚ್ಚಿನ ಸುಧಾರಣೆಯಾಗಿದೆ ಎಂದು ಅವರು ಹೇಳಿದರು.
ನವೀಕರಣ ಕಾರ್ಯಕ್ರಮಗಳು ರಸ್ತೆ ಅಪಘಾತಗಳಲ್ಲಿ ಶೇಕಡಾ 50 ರಷ್ಟು ಕಡಿತವನ್ನು ತರುತ್ತವೆ ಎಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು. 2030 ರ ವೇಳೆಗೆ ಶೂನ್ಯ ರಸ್ತೆ ಅಪಘಾತಗಳನ್ನು ಸಾಧಿಸುವುದು ಇದರ ಉದ್ದೇಶವಾಗಿದೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.