ನವದೆಹಲಿ: ಕಾತ್ರ (ಜಮ್ಮು ಮತ್ತು ಕಾಶ್ಮೀರ) – ದೆಹಲಿ ಎಕ್ಸ್ಪ್ರೆಸ್ ರಸ್ತೆ ಕಾರಿಡಾರ್ 2023 ರ ವೇಳೆಗೆ ಸಿದ್ಧವಾಗಲಿದ್ದು, ಇದರಿಂದ ಕಾತ್ರದಿಂದ ದೆಹಲಿಗೆ ಪ್ರಯಾಣದ ಸಮಯವು ಸುಮಾರು ಆರೂವರೆ ಗಂಟೆಗಳವರೆಗೆ ಕಡಿತಗೊಳ್ಳುವುದು ಮತ್ತು ಜಮ್ಮುವಿನಿಂದ ದೆಹಲಿಗೆ ಪ್ರಯಾಣವು ಆರು ಗಂಟೆಗಳವರೆಗೆ ಕಡಿತವಾಗುವುದು ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ,
ಡಾ.ಜಿತೇಂದ್ರ ಸಿಂಗ್ ಅವರ ಪ್ರಕಾರ, ಈ ಎಕ್ಸ್ಪ್ರೆಸ್ ರಸ್ತೆ ಕಾರಿಡಾರ್ ಒಮ್ಮೆ ಕಾರ್ಯರೂಪಕ್ಕೆ ಬಂದರೆ, ಜನರು ರೈಲು ಅಥವಾ ವಿಮಾನದ ಮೂಲಕ ಪ್ರಯಾಣ ಕೈಗೊಳ್ಳುವ ಬದಲು ರಸ್ತೆಯ ಮೂಲಕ ದೆಹಲಿಗೆ ಪ್ರಯಾಣಿಸಲು ಬಯಸುತ್ತಾರೆ.
“ಈ ರಸ್ತೆ ಕಾರಿಡಾರ್ನ ವಿಶಿಷ್ಟ ಲಕ್ಷಣವೆಂದರೆ ಅದು ಪವಿತ್ರ ನಗರಗಳಾದ ಕಾತ್ರ ಮತ್ತು ಅಮೃತಸರವನ್ನು ಸಂಪರ್ಕಿಸುತ್ತದೆ, ಮತ್ತು ಅದೇ ಸಮಯದಲ್ಲಿ ಎರಡು ತಾಣಗಳ ನಡುವೆ ಇರುವ ಇತರ ಕೆಲವು ಪ್ರಮುಖ ಧಾರ್ಮಿಕ ದೇವಾಲಯಗಳಿಗೆ ಸಂಪರ್ಕವನ್ನು ನೀಡುತ್ತದೆ” ಎಂದು ಅವರು ಹೇಳಿದ್ದಾರೆ.
M /S ಫೀಡ್ಬ್ಯಾಕ್ ಕನ್ಸಲ್ಟೆಂಟ್ಸ್ ಲಿಮಿಟೆಡ್ ನಡೆಸಿದ ಸಮೀಕ್ಷೆ ಪೂರ್ಣಗೊಂಡ ನಂತರ, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ ಮತ್ತು ತಳಮಟ್ಟದ ಕಾಮಗಾರಿ ಪ್ರಾರಂಭವಾಗಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.
35,000 ಕೋಟಿ ರೂಪಾಯಿಗಳ ಈ ಎಕ್ಸ್ಪ್ರೆಸ್ ಕಾರಿಡಾರ್ ಜಮ್ಮು ಮತ್ತು ಕತುವಾ, ಜಲಂಧರ್, ಅಮೃತಸರ, ಕಪುರ್ತಾಲದಂತಹ ಪ್ರಮುಖ ನಗರಗಳನ್ನು ಸಂಪರ್ಕಿಸಲಿದೆ.
ಕಾತ್ರ ವೈಷ್ಣೋ ದೇವಿ ಲೋಕಸಭಾ ಸ್ಥಾನವನ್ನು ಪ್ರತಿನಿಧಿಸುವ ಡಾ.ಜಿತೇಂದ್ರ ಸಿಂಗ್ ಅವರು 2015 ರಿಂದ ಈ ಯೋಜನೆಯನ್ನು ಅನುಸರಿಸುತ್ತಿದ್ದಾರೆ ಮತ್ತು ಸುಮಾರು ಮೂರೂವರೆ ವರ್ಷಗಳ ಹಿಂದೆ ಕಾತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ಅವರು ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿದ್ದಾಗಿ ಘೋಷಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.