ರಾಂಚಿ: ವಿದ್ಯೆ ಕಲಿಯಲು ಯಾವ ವಯಸ್ಸಾದರೆ ಏನು, ಕಲಿಯುವ ಮನಸ್ಸಿದ್ದರೆ ವಯಸ್ಸು ದೊಡ್ಡ ವಿಷಯವೇ ಅಲ್ಲ. ಇದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದ್ದಾರೆ ಜಾರ್ಖಂಡ್ನ ಶಿಕ್ಷಣ ಸಚಿವ ಜಗರ್ನಾಥ್ ಮಹತೋ. ಎಸ್ಎಸ್ಎಲ್ಸಿ ಮುಗಿಸಿ ಇದೀಗ 25 ವರ್ಷಗಳ ಬಳಿಕ ಮತ್ತೆ ಕಾಲೇಜಿಗೆ ಪ್ರಥಮ ಪಿಯುಸಿಗೆ ಸೇರಿ ತಮ್ಮ ವಿದ್ಯಾಭ್ಯಾಸದ ಬಗ್ಗೆ ಟೀಕೆ ಮಾಡುತ್ತಿರುವ ಟೀಕಾಕಾರರಿಗೆ ಉತ್ತರ ನೀಡಲು ಮುಂದಾಗಿದ್ದಾರೆ.
ಸಚಿವರು ಹತ್ತನೇ ತರಗತಿ ಪೂರ್ಣಗೊಳಿಸಿದ್ದು ತಮ್ಮ 29 ನೇ ವಯಸ್ಸಿನಲ್ಲಿ. ಇದಾಗಿ 25 ವರ್ಷಗಳೇ ಕಳೆದಿದ್ದು, ಸದ್ಯ ಇದೀಗ ಮತ್ತೆ ಅಧ್ಯಯನ ನಡೆಸಲು ಕಾಲೇಜಿಗೆ ಸೇರಿಕೊಂಡಿದ್ದಾರೆ. ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡಿರುವ ಸಚಿವರು ರಾಜ್ಯಶಾಸ್ತ್ರದಲ್ಲಿ ತಮಗೆ ಹೆಚ್ಚಿನ ಆಸಕ್ತಿ ಎಂಬುದಾಗಿಯೂ ತಿಳಿಸಿದ್ದಾರೆ. ಸದ್ಯ ಇವರಿಗೆ 54 ವರ್ಷ ವಯಸ್ಸಾಗಿದ್ದು ನವಯ ದೇವಿ ಮಹತೋ ಮೆಮೋರಿಯಲ್ ಇಂಟರ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಸೇರಿ ದಾಖಲೆ ಬರೆದಿದ್ದಾರೆ.
ಶಿಕ್ಷಣ ಸಚಿವರಾಗಿರುವ ಇವರ ವಿದ್ಯಾಭ್ಯಾಸ, ಶೈಕ್ಷಣಿಕ ಅರ್ಹತೆಗಳ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡಿದ್ದ ಬೆನ್ನಲ್ಲೇ, ಸಚಿವರು ಕಾಲೇಜಿಗೆ ಸೇರಿದ್ದಾರೆ. ಆ ಮೂಲಕವೇ ವಿರೋಧಿಗಳ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ. ಗಿರಿಧ್ನ ಧುಮ್ರಿ ವಿಧಾನ ಸಭಾ ಕ್ಷೇತ್ರದ ಪ್ರತಿನಿಧಿಯಾಗಿರುವ ಇವರು, ಹೇಮಂತ್ ಸೊರೇನ್ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಆ ಬಳಿಕ ಅವರನ್ನು ವಿಪಕ್ಷ ನಾಯಕರು ವಿದ್ಯಾಭ್ಯಾಸದ ಆಧಾರದಲ್ಲಿ ಟೀಕಿಸತೊಡಗಿದ್ದರು. ಸದ್ಯ ಈ ಟೀಕೆಗಳಿಗೆಲ್ಲ ಉತ್ತರ ನೀಡುವ ಸಲುವಾಗಿ ಸಚಿವರು ಮತ್ತೆ ಕಾಲೇಜಿನತ್ತ ಮುಖ ಮಾಡಿದ್ದು, ಇತರರಿಗೂ ಮಾದರಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.