ನವದೆಹಲಿ: ಭಾರತದ 5 ಜಿ ನೆಟ್ವರ್ಕ್ ರೋಲ್ಔಟ್ನಿಂದ ಚೀನಾದ ತಂತ್ರಜ್ಞಾನ ಕಂಪೆನಿಗಳಾದ ಹುವಾಯ್ ಮತ್ತು ZTE ಗಳನ್ನು ನಿಷೇಧಿಸಬೇಕು ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಸದಸ್ಯರು ಕೇಂದ್ರ ಸಂವಹನ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರದ ಮುಖೇನ ಮನವಿ ಸಲ್ಲಿಸಿದ್ದಾರೆ.
ಚೀನಾದ ಲಡಾಕ್ನ ಗಲ್ವಾನ್ ಗಡಿಯಲ್ಲಿ ಭಾರತದ ಜೊತೆಗೆ ಕಾಲ್ಕೆರೆದುಕೊಂಡು ಸಂಘರ್ಷವೇರ್ಪಡಿಸಿ ದೇಶದ ಸೈನಿಕರು ಹುತಾತ್ಮರಾದ ಬಳಿಕ ಚೀನಾದೊಂದಿಗಿನ ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಸದಂತೆ ಚಿಲ್ಲರೆ ವ್ಯಾಪಾರಿಗಳಿಂದ ಹಿಡಿದು ತಂತ್ರಜ್ಞಾನದವರೆಗಿನ ಎಲ್ಲಾ ರೀತಿಯ ವ್ಯಾಪಾರಿಗಳೂ ಅಭಿಯಾನ ನಡೆಸುತ್ತಿರುವುದಾಗಿಯೂ ಒಕ್ಕೂಟದ ಸದಸ್ಯರು ಮಾಹಿತಿ ನೀಡಿದ್ದಾರೆ.
ದೇಶದ ಬಹುನಿರೀಕ್ಷಿತ 5 ಜಿ ನೆಟ್ವರ್ಕ್ ರೋಲ್ಔಟ್ಗಳಲ್ಲಿ ಚೀನಾದ 2 ಕಂಪೆನಿಗಳಿಗೆ ಅವಕಾಶ ನೀಡಬೇಕೇ ಎಂದು ಸರ್ಕಾರದ ಸಮಿತಿ ಚಿಂತನೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅವುಗಳಿಗೆ ಅವಕಾಶ ನೀಡದಂತೆ ಒಕ್ಕೂಟ ಪತ್ರ ಮುಖೇನ ತಿಳಿಸಿದೆ. ಹುವಾಯ್ ಮತ್ತು ZTE ಟೆಕ್ನಾಲಜಿಗಳಿಗೆ ಅವಕಾಶ ನೀಡದಂತೆ ನಿಷೇಧ ಹೇರಬೇಕು ಎಂದೂ ಪತ್ರ ಮೂಲಕ ಒತ್ತಡ ಹೇರಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ‘ವೋಕಲ್ ಫಾರ್ ಲೋಕಲ್’ ಮತ್ತು ‘ಆತ್ಮನಿರ್ಭರ ಭಾರತ’ದ ಕರೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯರಿಗೆ ಈ ಸಂದರ್ಭವನ್ನು ಬಳಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದೂ ಪತ್ರದಲ್ಲಿ ತಿಳಿಸಿದೆ. ಜೊತೆಗೆ ಭಾರತದ ಹೆದ್ದಾರಿ ಮತ್ತು ರೈಲ್ವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಚೀನಾ ಕಂಪೆನಿಗಳಿಗೆ ಕೇಂದ್ರದಿಂದ ನಿರ್ಬಂಧ ಹೇರಲಾಗಿರುವ ಬಗ್ಗೆಯೂ ಈ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, 5 ಜಿ ತಂತ್ರಜ್ಞಾನದಿಂದಲೂ ಚೀನಾವನ್ನು ಹೊರಗಿಡುವಂತೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.