ನವದೆಹಲಿ: ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ನಲ್ಲಿ ಗುರುದ್ವಾರದ ಮೇಲೆ ಮಾರ್ಚ್ 25 ರಂದು ನಡೆದ ದಾಳಿಯಲ್ಲಿ ಕೊಲೆಯಾದವರ ಸಂಬಂಧಿಕರು ಸೇರಿದಂತೆ ಸುಮಾರು 180 ಅಫ್ಘಾನ್ ಸಿಖ್ ಮತ್ತು ಹಿಂದೂ ಪ್ರಜೆಗಳನ್ನು ಭಾರತ ಸ್ಥಳಾಂತರಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಭೀಕರ ಕಾಬೂಲ್ ಗುರುದ್ವಾರ ದಾಳಿಯು 25 ಸಿಖ್ ಆರಾಧಕರ ಸಾವಿಗೆ ಕಾರಣವಾಗಿತ್ತು.
ವರದಿಗಳ ಪ್ರಕಾರ, ಸ್ಥಳಾಂತರಿಸುವಿಕೆಯು ಬುಧವಾರ ನಡೆಯುವ ನಿರೀಕ್ಷೆಯಿದೆ. ಜುಲೈ 26 ರಂದು ಹನ್ನೊಂದು ಅಫ್ಘಾನ್ ಸಿಖ್ಖರು ಮತ್ತು ಹಿಂದೂಗಳನ್ನು ಅಫ್ಘಾನಿಸ್ಥಾನದಿಂದ ಭಾರತಕ್ಕೆ ಸ್ಥಳಾಂತರಿಸಿದ ನಂತರ ಈ ಬೆಳವಣಿಗೆ ನಡೆಯಲಿದೆ.
ಜುಲೈ 26 ರಂದು ಸ್ಥಳಾಂತರಗೊಂಡವರಲ್ಲಿ ನಿಡಾನ್ ಸಿಂಗ್ ಎಂಬ ಸೆಹಜಧಾರಿ ಸಿಖ್ ಮತ್ತು ಯುವತಿ ಸಲ್ಮೀತ್ ಕೌರ್ ಸೇರಿದ್ದಾರೆ. ನಿಡಾನ್ ಅವರನ್ನು ಅಫ್ಘಾನಿಸ್ಥಾನದಲ್ಲಿ ಅಪಹರಿಸಲಾಗಿತ್ತು ಮತ್ತು ನಂತರ ಅವರನ್ನು ಅಫ್ಘಾನ್ ಭದ್ರತಾ ಪಡೆಗಳು ರಕ್ಷಿಸಿದವು. ಅಲ್ಲದೇ, ಯುವತಿ ಕೌರ್ ಅವರನ್ನು ಮುಸ್ಲಿಂ ಹುಡುಗನು ಮದುವೆಯಾಗಲು ಆಮಿಷವೊಡ್ಡಿದ್ದನು. ಕಾಬೂಲ್ ಗುರುದ್ವಾರ ದಾಳಿಯಲ್ಲಿ ಕೌರ್ ಅವರ ತಂದೆ ಮತ್ತು ಚಿಕ್ಕಪ್ಪ ಕೂಡ ಮೃತಪಟ್ಟಿದ್ದಾರೆ.
ಒಂದು ಕಾಲದಲ್ಲಿ ಸುಮಾರು ಒಂದು ಲಕ್ಷದಲ್ಲಿದ್ದ ಅಫ್ಘಾನಿಸ್ಥಾನದ ಸಿಖ್ಖರು ಮತ್ತು ಹಿಂದೂಗಳ ಜನಸಂಖ್ಯೆ ಕೇವಲ 700 ಕ್ಕೆ ಇಳಿದಿದೆ. ಎರಡು ಸಮುದಾಯಗಳ ಜನರು ತಾರತಮ್ಯ, ಭಯೋತ್ಪಾದನೆ, ಹಿಂಸೆ ಮತ್ತು ಕಿರುಕುಳಕ್ಕೆ ಒಳಗಾಗಿದ್ದಾರೆಂದು ತಿಳಿದುಬಂದಿದೆ. ಯುದ್ಧ ಪೀಡಿತ ರಾಷ್ಟ್ರದ ಇಸ್ಲಾಮಿಕ್ ಉಗ್ರಗಾಮಿಗಳು ಇವರ ಬದುಕನ್ನು ನರಕವಾಗಿಸಿದ್ದಾರೆ. ಹೀಗಾಗಿ ಇವರಿಗೆ ಭಾರತ ಆಶ್ರಯವನ್ನು ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.