ಕಠ್ಮಂಡು: ಕೊರೋನಾ ಸೋಂಕು ಇಡೀ ಜಗತ್ತಿನ ನಿದ್ದೆಗೆಡಿಸಿರುವ ಬೆನ್ನಲ್ಲೇ, ಭಾರತವು 28 ಮಿಲಿಯನ್ ರೂ. ಮೌಲ್ಯದ 10 ವೆಂಟಿಲೇಟರ್ಗಳನ್ನು ನೆರೆಯ ದೇಶ ನೇಪಾಳಕ್ಕೆ ಉಡುಗೊರೆಯಾಗಿ ನೀಡಿದೆ. ನೇಪಾಳದ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವತ್ರಾ ಅವರು ಅಲ್ಲಿನ ಸೇನಾ ಕೇಂದ್ರ ಕಛೇರಿಯಲ್ಲಿ ಈ ಉಡುಗೊರೆಯನ್ನು ನೇಪಾಳದ ಸೇನಾ ಮುಖ್ಯಸ್ಥರಾದ ಪೂರ್ಣಚಂದ್ರ ಥಾಪ ಅವರಿಗೆ ಹಸ್ತಾಂತರಿಸಿದ್ದಾರೆ
ಕೊರೋನಾ ಚಿಕಿತ್ಸೆಯ ಸಂದರ್ಭದಲ್ಲಿ ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿರುವ ರೋಗಿಗಳಿಗೆ ವೆಂಟಿಲೇಟರ್ ಅಗತ್ಯವಾಗಿದ್ದು, ಈ ನೆರವನ್ನು ನೇಪಾಳಕ್ಕೆ ನೀಡುವ ಮೂಲಕ ಭಾರತ ಮಾನವೀಯತೆ ಮೆರೆದಿದೆ. ಆ ಮೂಲಕ ನೇಪಾಳಕ್ಕೂ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಸಹಕಾರ ನೀಡಿದೆ. ಈ ಸಹಾಯ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸ್ನೇಹ ಸಂಬಂಧದ ಸಂಕೇತವೂ ಆಗಿದೆ. ನೆರೆಹೊರೆಯ ದೇಶಗಳ ನಡುವಿನ ಮಾನವೀಯ ಸಂಬಂಧದ ದೃಷ್ಟಿಯಿಂದಲೂ ಈ ನೆರವು ಮಹತ್ವದ ಪಾತ್ರ ವಹಿಸಲಿದೆ.
ಇನ್ನು ಈ ನೆರವನ್ನು ಪಡೆದುಕೊಂಡಿರುವ ನೇಪಾಳದ ಸೇನಾ ಮುಖ್ಯಸ್ಥರು, ಭಾರತ ಸರ್ಕಾರ ಕೊರೋನಾ ಸಂದರ್ಭದಲ್ಲಿ ನೇಪಾಳಕ್ಕೆ ಬೇಕಾದ ಅಗತ್ಯ ನೆರವನ್ನು ಒದಗಿಸಿಕೊಟ್ಟಿದ್ದಾಗಿ ತಿಳಿಸಿದ್ದಾರೆ. ಭಾರತದ ಇಂತಹ ಸಹಾಯ ಮನೋಭಾವ, ಬದ್ಧತೆಯನ್ನು ಅವರು ಶ್ಲಾಘಿಸಿದ್ದಾರೆ.
ಇನ್ನು ನೇಪಾಳದಲ್ಲಿ ಈ ವರೆಗೆ 22,592 ಜನರು ಕೊರೋನಾಗೆ ತುತ್ತಾಗಿದ್ದು, 73 ಮಂದಿ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿವಿ ತನ್ನ ವರದಿಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.