ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಿಎಂ-ಕಿಸಾನ್ ಯೋಜನೆಯ ಭಾಗವಾಗಿ 8.5 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ, 17,100 ಕೋಟಿಗಳನ್ನು ನೇರ ವರ್ಗಾವಣೆ ಮಾಡಿದ್ದಾರೆ. ರೈತರಿಗೆ ವಾರ್ಷಿಕವಾಗಿ,6,000 ನೇರ ಬೆಂಬಲ ನೀಡುವ ಗುರಿಯನ್ನು ಈ ಯೊಜನೆ ಹೊಂದಿದೆ.
ಈ ಮೊತ್ತವು 2018 ರಲ್ಲಿ ಪ್ರಾರಂಭಿಸಲಾದ ಯೋಜನೆಯ ಆರನೇ ಕಂತಿನ ಭಾಗವಾಗಿತ್ತು. ಯೋಜನೆಯ ಭಾಗವಾಗಿ 10 ಕೋಟಿ ರೈತರಿಗೆ ಇದುವರೆಗೆ ₹ 90,000 ಕೋಟಿಗೂ ಅಧಿಕ ನೇರ ನಗದು ಲಾಭವನ್ನು ಒದಗಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
“ಪಿಎಂ-ಕಿಸಾನ್ ಸಮ್ಮಾನ್ ನಿಧಿಯಡಿ 17,000 ಕೋಟಿ ರೂ.ಗಳನ್ನು ಒಂದೇ ಕ್ಲಿಕ್ನಲ್ಲಿ 8.5 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಯಾವುದೇ ಮಧ್ಯವರ್ತಿಗಳು ಅಥವಾ ಆಯೋಗಗಳ ಬೆಂಬಲವಿಲ್ಲದೆ, ಅದು ನೇರವಾಗಿ ರೈತರಿಗೆ ತಲುಪಿದೆ. ಯೋಜನೆಯ ಉದ್ದೇಶ ಈಡೇರುತ್ತಿರುವ ಬಗ್ಗೆ ನನಗೆ ಖುಷಿ ಇದೆ” ಎಂದು ಮೋದಿ ಈ ವೇಳೆ ಹೇಳಿದ್ದಾರೆ.
ಮಾತ್ರವಲ್ಲದೇ, 1 ಲಕ್ಷ ಕೋಟಿ ರೂ.ಗಳ ಬಂಡವಾಳ ಹೊಂದಿರುವ ಕೃಷಿ ಮೂಲಸೌಕರ್ಯ ನಿಧಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ಪ್ರಾರಂಭಿಸಿದರು, ಇದರಲ್ಲಿ ದೇಶಾದ್ಯಂತ ಲಕ್ಷಾಂತರ ರೈತರು, ಸಹಕಾರಿ ವಲಯದ ಜನರು ಮತ್ತು ನಾಗರಿಕರು ಭಾಗವಹಿಸಿದ್ದಾರೆ. ಕೊಯ್ಲು ನಂತರದ ನಿರ್ವಹಣಾ ಮೂಲಸೌಕರ್ಯ ಮತ್ತು ಸಮುದಾಯ ಕೃಷಿ ಸ್ವತ್ತುಗಳಾದ ಕೋಲ್ಡ್ ಸ್ಟೋರೇಜ್, ಸಂಗ್ರಹ ಕೇಂದ್ರಗಳು, ಸಂಸ್ಕರಣಾ ಘಟಕಗಳು ಇತ್ಯಾದಿಗಳ ರಚನೆಯ ವೇಗವರ್ಧಿಸುವ ಉದ್ದೇಶವನ್ನು ಈ ನಿಧಿ ಹೊಂದಿದೆ. ಈ ಸ್ವತ್ತುಗಳು ರೈತರಿಗೆ ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯವನ್ನು ಪಡೆಯಲು ಸಹಾಯ ಮಾಡಲಿವೆ.
“ರೈತರಿಗೆ ಸಂಬಂಧಿಸಿದ ಎಷ್ಟು ಯೋಜನೆಗಳಿವೆಯೋ, ಎಷ್ಟು ಸುಧಾರಣೆಗಳನ್ನು ತರಲಾಗಿದೆಯೋ ಅದರ ಕೇಂದ್ರ ಬಿಂದು ನಮ್ಮ ಸಣ್ಣ ರೈತರು. ಹೆಚ್ಚು ತೊಂದರೆಗಳನ್ನು ಅನುಭವಿಸುತ್ತಿರುವ ನಮ್ಮ ಸಣ್ಣ ರೈತರನ್ನು ನಮ್ಮ ಯೋಜನೆಗಳ ಕೇಂದ್ರವಾಗಿಸಲಾಗಿದೆ.
2 ದಿನಗಳ ಹಿಂದೆ, ದೇಶದ ಸಣ್ಣ ರೈತರನ್ನು ಒಳಗೊಂಡಂತೆ ಬಹಳ ದೊಡ್ಡ ಯೋಜನೆಯನ್ನು ಪ್ರಾರಂಭಿಸಲಾಗಿದೆ, ಇದು ಮುಂಬರುವ ಸಮಯದಲ್ಲಿ ಇಡೀ ದೇಶಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ದೇಶದ ಮೊದಲ ಕಿಸಾನ್ ರೈಲು ಮಹಾರಾಷ್ಟ್ರ ಮತ್ತು ಬಿಹಾರ ನಡುವೆ ಪ್ರಾರಂಭವಾಗಿದೆ” ಎಂದು ಮೋದಿ ಈ ವೇಳೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.