ಶ್ರೀನಗರ: ಭಾರತದ ಮುಕುಟ ಮಣಿ ಎಂದು ಕರೆಯಲ್ಪಡುವ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿ ಒಂದು ವರ್ಷಗಳು ಸಂದಿವೆ. ಈಗ ಅಲ್ಲಿ ಕೇಂದ್ರ ಸರಕಾರ ಅಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡುತ್ತಿದೆ. ವರದಿಗಳ ಪ್ರಕಾರ, ಕಳೆದ ಐದು ಹತ್ತು ವರ್ಷಗಳಿಂದ ಅಲ್ಲಿ ಬಾಕಿ ಉಳಿದಿದ್ದ ರೂ.6000 ಕೋಟಿ ಮೌಲ್ಯದ 2,273 ಮೂಲಸೌಕರ್ಯ ಯೋಜನೆಗಳನ್ನು ಕೇಂದ್ರ ಸರಕಾರ ಮಂಜೂರು ಮಾಡಿದೆ ಮತ್ತು ಅದರಲ್ಲಿ 506 ಯೋಜನೆಗಳನ್ನು ಕಳೆದ ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಬಿ ವಿಆರ್ ಸುಬ್ರಹ್ಮಣ್ಯಂ ಬಗ್ಗೆ ಮಾಹಿತಿಯನ್ನು ನೀಡಿದ್ದು, ನೂತನ ಕೇಂದ್ರಾಡಳಿತ ಪ್ರದೇಶದಲ್ಲಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದು ಹಲವು ಕಾರ್ಯಗಳು ಪ್ರಗತಿಯಲ್ಲಿದೆ. ಪಂಚಾಯತ್ ರಚನೆಯ ಬಲಪಡಿಸುವಿಕೆ, ಜೇಲಂ ಫ್ಲಡ್ ಮಿಟಿಗೇಶನ್ ಯೋಜನೆಯ ಮೊದಲ ಹಂತ, 10000 ಉದ್ಯೋಗಗಳ ಸೃಷ್ಟಿ ಮತ್ತು 50 ಹೊಸ ಪದವಿ ಕಾಲೇಜುಗಳ ತೆರೆಯುವಿಕೆ ಮುಂತಾದ ಯೋಜನೆಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ಅವರು ಹೇಳಿದ್ದಾರೆ.
“ನಮಗೆ ತಾಳ್ಮೆ ಬೇಕು ಎಂದು ನಾನು ಭಾವಿಸುತ್ತೇನೆ. ನಾವು ಪ್ರಗತಿಯ ಮಾರ್ಗವನ್ನು ಪಡೆದುಕೊಂಡಿದ್ದೇವೆ ಮತ್ತು ನಾವು ಹಂತ ಹಂತವಾಗಿ ಮುಂದುವರಿಯುತ್ತಿದ್ದೇವೆ. ಒಮ್ಮೆ ನಾವು ಅಭಿವೃದ್ಧಿ ಪ್ರಕ್ರಿಯೆಯನ್ನು ಜಾರಿಗೆ ತಂದರೆ, ಒಮ್ಮೆ ಜನರು ಉದ್ಯೋಗಗಳನ್ನು ಪಡೆದುಕೊಂಡರೆ, ಹೂಡಿಕೆ ಬೆಳೆಯುತ್ತಿರುವುದನ್ನು ನೋಡಿದರೆ ಜನರ ಮನಸ್ಥಿತಿ ಬದಲಾಗುತ್ತದೆ ” ಎಂದು ಅವರು ಹೇಳಿದ್ದಾರೆ.
ಹಲವಾರು ವರ್ಷಗಳ ದುರುಪಯೋಗ, ಭ್ರಷ್ಟಾಚಾರ ಮತ್ತು ನಂಬಲಾಗದ ಮಟ್ಟದ ವಂಚನೆಯಿಂದಾಗಿ ಇಲ್ಲಿ ಅಭಿವೃದ್ದಿ ಕುಂಠಿತಗೊಂಡಿತ್ತು, ಕೆಲವೇ ಕುಟುಂಬಗಳು ಹಣ ಮಾಡಿದವು, ಅಧಿಕಾರ ನಡೆಸಿದವು ಎಂದು ಅವರು ಹೇಳಿದ್ದಾರೆ.
ಶಹಪುರ್-ಕಂಡಿ ಯೋಜನೆಯಂತಹ ನಾಲ್ಕು ದಶಕಗಳಿಂದ ಬಾಕಿ ಇರುವ ಯೋಜನೆಗಳನ್ನು ಪ್ರಾರಂಭಿಸಲಾಗಿದೆ, 5-10 ವರ್ಷಗಳ ಕಾಲ ಬಳಲುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಜೆ & ಕೆ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮವು ಕಳೆದ ವರ್ಷ ರಚನೆಗೊಂಡಿತು. ಪಂಚಾಯತ್ ಚುನಾವಣೆಗಳು ಯಶಸ್ವಿಯಾಗಿ ನಡೆದವು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.