ಕೋಯಿಕ್ಕೋಡ್: ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಭಾರತೀಯರನ್ನು ಹೊತ್ತು ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್ ಇಂಡಿಯಾ ವಿಮಾನ ನಿನ್ನೆ ರಾತ್ರಿ ಅಪಘಾತಕ್ಕೀಡಾಗಿದೆ. ಈ ವಿಮಾನದಲ್ಲಿ ಸುಮಾರು 190 ಭಾರತೀಯರು ಇದ್ದರು ಎನ್ನಲಾಗಿದೆ. ಈಗಾಗಲೇ 20 ಮಂದಿಯ ಸಾವನ್ನು ಖಚಿತಪಡಿಸಲಾಗಿದೆ. ಅನೇಕರ ಪರಿಸ್ಥಿತಿ ಗಂಭೀರವಾಗಿದೆ. ವಿಮಾನದ ಇಬ್ಬರು ಪೈಲಟ್ ಗಳು ಮೃತಪಟ್ಟಿದ್ದಾರೆ.
ಈ ಘಟನೆಯ ಬಗ್ಗೆ ಕೇಂದ್ರ ವಿಮಾನ ಯಾನ ನಾಗರಿಕ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತನಿಖೆಗೆ ಆಗ್ರಹಿಸಿದ್ದಾರೆ. ಏರ್ ಇಂಡಿಯಾ, ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ), ಏರ್ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಶನ್ ಬ್ಯೂರೋ (ಎಎಐಬಿ)ದ ವೃತ್ತಿಪರರ ಎರಡು ತಂಡಗಳು ಘಟನೆಯ ವಿಸ್ತೃತ ತನಿಖೆಯನ್ನು ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ಏರ್ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಶನ್ ಬ್ಯೂರೋ (ಎಎಐಬಿ) ನಾಗರಿಕ ವಿಮಾನಯಾನ ಸಚಿವಾಲಯದ ಒಂದು ವಿಭಾಗವಾಗಿದ್ದು, ಭಾರತದಲ್ಲಿ ವಿಮಾನ ಅಪಘಾತಗಳು ಮತ್ತು ವಿಮಾನಕ್ಕೆ ಸಂಬಂಧಿಸಿದ ಇತರ ಘಟನೆಗಳ ಬಗ್ಗೆ ತನಿಖೆ ನಡೆಸುತ್ತದೆ.
ಟ್ವೀಟ್ ಮಾಡಿರುವ ಪುರಿ, “ಏರ್ ಇಂಡಿಯಾ, ಎಎಐ, ಎಎಐಬಿಯ ಎರಡು ತನಿಖಾ ತಂಡಗಳು ಕೋಯಿಕ್ಕೋಡ್ಗೆ ತಲುಪಲಿವೆ. ವಿಮಾನದಿಂದ ಎಲ್ಲರನ್ನೂ ಈಗ ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಈಗ ಪೂರ್ಣಗೊಂಡಿದೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ದೆಹಲಿ ಮತ್ತು ಮುಂಬೈಯಿಂದ ಏರ್ ಇಂಡಿಯಾ ಮತ್ತು ಎಎಐ ತಂಡಗಳು ಕೋಯಿಕ್ಕೋಡ್ಗೆ ತೆರಳಿವೆ.
Two investigation teams of professionals from @airindiain @AAI_Official & AAIB will leave for Kozhikode at 02.00 hrs & 05.00 hrs.
Everyone has now been rescued from the aircraft.
Rescue operations are now complete.
Injured being treated at various city hospitals.
— Hardeep Singh Puri (@HardeepSPuri) August 7, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.