ಅಯೋಧ್ಯೆ: ಉದ್ದೇಶಿತ ರಾಮ ದೇವಾಲಯದ ನಿರ್ಮಾಣ ಪ್ರಾರಂಭವಾಗುವ ಮೊದಲೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈವರೆಗೆ 41 ಕೋಟಿ ರೂಪಾಯಿಗಳ ದೇಣಿಗೆಯನ್ನು ಸ್ವೀಕಾರ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಆದರೆ ಇದು ಧಾರ್ಮಿಕ ನಾಯಕರಾದ ಪರಮಾರ್ಥ್ ನಿಕೇತಾನ್ನ ಸ್ವಾಮಿ ಚಿದಾನಂದ್ ಸರಸ್ವತಿ, ಜುನಾ ಅಖಾಡದ ಸ್ವಾಮಿ ಅವಧೇಶಾನಂದ ಗಿರಿ, ಬಾಬಾ ರಾಮದೇವ್ ಮತ್ತು ಬುಧವಾರ ಅಯೋಧ್ಯೆಯಲ್ಲಿದ್ದ ಇತರ ಗಣ್ಯರು ಸೇರಿದಂತೆ ಧಾರ್ಮಿಕ ಮುಖಂಡರು ನೀಡಿದ ದೇಣಿಗೆಯನ್ನು ಒಳಗೊಂಡಿಲ್ಲ
ಟ್ರಸ್ಟ್ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಅವರ ಪ್ರಕಾರ, “ಮಂಗಳವಾರ ಲಾಗ್ ಬುಕ್ ಅನ್ನು ಕೊನೆಯ ಬಾರಿಗೆ ನೋಡಿದಾಗ ಟ್ರಸ್ಟ್ಗೆ ಒಟ್ಟು ದೇಣಿಗೆ 30 ಕೋಟಿ ರೂ. ಆಗಿತ್ತು. ಮೊರಾರಿ ಬಾಬು ಅವರು ಇನ್ನೂ 11 ಕೋಟಿ ರೂ. ದೇಣಿಗೆ ನೀಡಿದ್ದಾರೆ, ಇದರಿಂದಾಗಿ ಸುಮಾರು 41 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ. ಆದರೂ, ಈ ಮೊತ್ತವು ಬುಧವಾರ ನೀಡಿದ ದೇಣಿಗೆಗಳನ್ನು ಒಳಗೊಂಡಿಲ್ಲ” ಎಂದಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲೂ ಜನರು ರಾಮ ದೇವಾಲಯದ ನಿರ್ಮಾಣಕ್ಕಾಗಿ ಕೊಡುಗೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಲಾಕ್ಡೌನ್ ಅನ್ನು ವಿಧಿಸಿದ ಮಾರ್ಚ್ 25 ರಿಂದ ಟ್ರಸ್ಟ್ನ ಎರಡು ಪ್ರತ್ಯೇಕ ಅಧಿಕೃತ ಖಾತೆಗಳಲ್ಲಿ ಒಟ್ಟು 4.60 ಕೋಟಿ ರೂ. ದೇಣಿಗೆ ಜಮಾವಣೆಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷದ ರಾಮ ನವಮಿಯ ಬಳಿಕದಿಂದ ಟ್ರಸ್ಟ್ ಆನ್ಲೈನ್ ದೇಣಿಗೆ ಸಂಗ್ರಹವನ್ನು ಆರಂಭ ಮಾಡಿದೆ. ಈಗಾಗಲೇ ಸುಮಾರು 5,000,ಜನರು ಇದರ ಮೂಲಕ ದೇಣಿಗೆಯನ್ನು ನೀಡಿದ್ದಾರೆ. ರೂ.11ರಿಂದ ಸಾಮರ್ಥ್ಯ ಇರುವವರೆಗೆ ಹಣವನ್ನು ನೀಡಬಹುದಾಗಿದೆ. ವಿದೇಶದಲ್ಲಿರುವವರೂ ದೇಣಿಗೆ ನೀಡಲು ಹೆಚ್ಚು ಅಸಕ್ತರಾಗಿದ್ದಾರೆ ಎಂದು ಟ್ರಸ್ಟ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.