ನವದೆಹಲಿ: ರಕ್ಷಣಾ ಸಚಿವಾಲಯವು ಕರಡು ರಕ್ಷಣಾ ಉತ್ಪಾದನೆ ಮತ್ತು ರಫ್ತು ಉತ್ತೇಜನ ನೀತಿ 2020 (ಡಿಪಿಇಪಿಪಿ -2020) ಅನ್ನು ರೂಪಿಸಿದೆ. ವರದಿಗಳ ಪ್ರಕಾರ, ಆತ್ಮನಿರ್ಭರ ಭಾರತ ಯೋಜನೆಯಡಿ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ಪ್ರಚೋದನೆಯನ್ನು ನೀಡುವುದು ಈ ನೀತಿಯ ಗುರಿ ಆಗಿದೆ.
ಸ್ವಾವಲಂಬನೆ ಮತ್ತು ರಫ್ತುಗಾಗಿ ದೇಶದ ರಕ್ಷಣಾ ಉತ್ಪಾದನಾ ಸಾಮರ್ಥ್ಯಗಳಿಗೆ ಕೇಂದ್ರೀಕೃತ, ರಚನಾತ್ಮಕ ಮತ್ತು ಮಹತ್ವದ ಪ್ರೋತ್ಸಾಹವನ್ನು ಒದಗಿಸಲು ರಕ್ಷಣಾ ಸಚಿವಾಲಯದ ಮಾರ್ಗದರ್ಶಿ ದಾಖಲೆಯೆಂದು ಡಿಪಿಇಪಿಪಿ -2020 ಅನ್ನು ಭಾವಿಸಲಾಗಿದೆ.
ಕರಡು ರಕ್ಷಣಾ ಉತ್ಪಾದನೆ ಮತ್ತು ರಫ್ತು ಉತ್ತೇಜನ ನೀತಿ 2020 ರಕ್ಷಣಾ ಸಚಿವಾಲಯ ಕೈಗೊಳ್ಳಬೇಕಾದ ಸ್ಪಷ್ಟ ಗುರಿ ಮತ್ತು ಉದ್ದೇಶಗಳನ್ನು ಗುರುತಿಸಿದೆ. ಎಲ್ಲಕ್ಕಿಂತ ಮೊದಲು ಮತ್ತು ಅಗ್ರಗಣ್ಯವಾಗಿ 2025ರ ವೇಳೆಗೆ ಏರೋಸ್ಪೇಸ್ ಮತ್ತು ರಕ್ಷಣಾ ಸರಕು ಮತ್ತು ಸೇವೆಗಳಲ್ಲಿ 35 ಸಾವಿರ ಕೋಟಿ ರೂಪಾಯಿಗಳ ರಫ್ತು ಸೇರಿದಂತೆ ರೂ. 1 ಲಕ್ಷ 75 ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಗುರಿಯನ್ನು ಇದು ಹೊಂದಿದೆ.
ಗುಣಮಟ್ಟದ ಉತ್ಪನ್ನಗಳೊಂದಿಗೆ ಸಶಸ್ತ್ರ ಪಡೆಗಳ ಅಗತ್ಯಗಳನ್ನು ಪೂರೈಸಲು ಏರೋಸ್ಪೇಸ್ ಮತ್ತು ನಾವೆಲ್ ಶಿಪ್ ಬಿಲ್ಡಿಂಗ್ ಉದ್ಯಮ ಸೇರಿದಂತೆ ಕ್ರಿಯಾತ್ಮಕ, ದೃಢವಾದ ಮತ್ತು ಸ್ಪರ್ಧಾತ್ಮಕ ರಕ್ಷಣಾ ಉದ್ಯಮವನ್ನು ಅಭಿವೃದ್ಧಿಪಡಿಸುವುದನ್ನು ಹೊಸ ಕರಡು ನೀತಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಸಚಿವಾಲಯವು ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶೀಯ ವಿನ್ಯಾಸಗಳ ಮೂಲಕ ಮೇಕ್ ಇನ್ ಇಂಡಿಯಾ ಉಪಕ್ರಮಗಳನ್ನು ಮುಂದಿಡಲು ಒತ್ತು ನೀಡಲಿದೆ. ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ, ನಾವೀನ್ಯತೆಗೆ ಪ್ರತಿಫಲ ನೀಡುವ, ಭಾರತೀಯ ಐಪಿ ಮಾಲೀಕತ್ವವನ್ನು ಸೃಷ್ಟಿಸುವ ಮತ್ತು ದೃಢವಾದ ಮತ್ತು ಸ್ವಾವಲಂಬಿ ರಕ್ಷಣಾ ಉದ್ಯಮವನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಲಿದೆ.
ರಕ್ಷಣಾ ಸಚಿವಾಲಯವು ಎಲ್ಲಾ ಮಧ್ಯಸ್ಥಗಾರರಿಂದ ಕರಡು ಡಿಪಿಇಪಿಪಿ -2020 ನೀತಿಯ ಕುರಿತು ಈ ವರ್ಷದ ಆಗಸ್ಟ್ 17 ರೊಳಗೆ ಪ್ರತಿಕ್ರಿಯೆಗಳನ್ನು ಕೋರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.