ನವದೆಹಲಿ: ವಿಶ್ವ ಸಂಸ್ಕೃತ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಜನರಿಗೆ ಶುಭಕೋರಿದರು. ಸಂಸ್ಕೃತದಲ್ಲಿ ಅವರು ಶುಭಾಶಯಗಳನ್ನು ಕೋರಿದ್ದು ವಿಶೇಷ. ಶ್ರಾವಣ ತಿಂಗಳ ಪೂರ್ಣಿಮೆಯಂದು ವಿಶ್ವ ಸಂಸ್ಕೃತ ದಿನವನ್ನು ಆಚರಣೆ ಮಾಡಲಾಗುತ್ತದೆ. ಸಂಸ್ಕೃತದ ಪುನರುಜ್ಜೀವನಕ್ಕೆ ಉತ್ತೇಜನ ನೀಡುವುದು ಈ ದಿನದ ಮಹತ್ವವಾಗಿದೆ.
ಭಾರತದ ಯುವಜನರಿಗೆ ಪ್ರಾಚೀನ ಭಾಷೆಯ ಮಹತ್ವವನ್ನು ತಿಳಿಸಿಕೊಡುವ ಉದ್ದೇಶ ಈ ದಿನದ ಹಿಂದೆ ಇದೆ. ಸುಮಾರು 3500 ವರ್ಷಗಳ ಹಿಂದೆ ಉಗಮಗೊಂಡಿದೆ ಎಂದು ನಂಬಲಾದ ಸಂಸ್ಕೃತವನ್ನು ರಕ್ಷಣೆ ಮಾಡುವ ಮೂಲಕ ನಮ್ಮ ರಾಷ್ಟ್ರೀಯ ಪರಂಪರೆಯನ್ನು ಕಾಪಾಡುವುದು ಇದರ ಗುರಿ.
ಸಂಸ್ಕೃತವನ್ನು ದೇವವಾಣಿ ಎಂದು ಕರೆಯಲಾಗುತ್ತದೆ. ಬ್ರಹ್ಮ ಇದನ್ನು ರಚಿಸಿದ ಎಂದು ನಂಬಲಾಗಿದೆ.
“ಸಂಸ್ಕೃತ ವೇದಗಳ ಕಾಲದಿಂದ ಆಧುನಿಕ ಕಾಲದವರೆಗೂ ನಮ್ಮ ಮೌಲ್ಯ, ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗ ಮತ್ತು ಜ್ಞಾನದ ಸಾರ್ವತ್ರಿಕ ಪ್ರಸರಣದಲ್ಲಿ ಇದು ಮಹತ್ವದ ಪಾತ್ರ ನಿಭಾಯಿಸಿದೆ. ಭಾರತದ ಜ್ಞಾನ, ತತ್ವಜ್ಞಾನ, ವಿಜ್ಞಾನ ಮತ್ತು ನೈತಿಕತೆಯ ಅಭಿವ್ಯಕ್ತಿಯಲ್ಲಿ ಸಂಸ್ಕೃತ ಗ್ರಂಥಗಳು ಮಹತ್ವದ ವಾಹಕಗಳಾಗಿವೆ. ಸಂಸ್ಕೃತದ ಪ್ರಮುಖ ವಿಶೇಷತೆಯೆಂದರೆ, ಅದು ಅನಂತ ಪದ ರಚನೆಯ ಸಾಮರ್ಥ್ಯವನ್ನು ಹೊಂದಿರುವ ಭಾಷೆ ಮತ್ತು ಅದೇ ಕಾರಣದಿಂದ ಅಭಿವ್ಯಕ್ತಿ ಅಥವಾ ವಿಷಯದ ನಿಮಿಷದ ಸೂಕ್ಷ್ಮ ವ್ಯತ್ಯಾಸವನ್ನು ಸಂಸ್ಕೃತದಲ್ಲಿ ನಿಖರವಾಗಿ ವಿವರಿಸಬಹುದು” ಎಂದು ಮೋದಿ ಹೇಳಿದ್ದಾರೆ.
अद्य संस्कृतदिवसे ये संस्कृतभाषां पठन्ति तथा च जनेषु तस्याः प्रचारार्थं प्रयासं कुर्वन्ति तान् सर्वान् प्रणमामि। संस्कृतभाषा सुन्दरी भाषा अस्ति किञ्च सहस्रशः वर्षेभ्यः अस्माकं श्रेष्ठायाः संस्कृत्याः भागभूता अस्ति। आगामिषु वर्षेषु संस्कृतभाषायाः लोकप्रियता नितराम् अभिवर्धताम्।
— Narendra Modi (@narendramodi) August 3, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.